ಬೆಂಕಿ ಅವಘಡ: ವೃದ್ಧ ಸಜೀವ ದಹನ

ಬೆಂಕಿ ಅವಘಡ: ವೃದ್ಧ ಸಜೀವ ದಹನ

 

ತುಮಕೂರು, ಆ. 11- ವಾಸದ ಮನೆಗೆ ಬೆಂಕಿ ಬಿದ್ದು, ಮನೆಯಲ್ಲಿ ಮಲಗಿದ್ದ ವೃದ್ಧರೊಬ್ಬರು ಸಜೀವ ದಹನವಾಗಿರುವ ಘಟನೆ ತಾಲ್ಲೂಕಿನ ಬೆಳ್ಳಾವಿ ಪೊಲೀಸ್ ಠಾಣೆ ಸರಹದ್ದಿನಲ್ಲಿ ನಡೆದಿದೆ.

ಬಳ್ಳಾವಿ ಹೋಬಳಿಯ ಅಸಲೀಪುರ ಗ್ರಾಮದ ನಿವಾಸಿ ದೊಡ್ಡ ಬಸವಯ್ಯ (೭೦) ಎಂಬುವರೇ ಸಜೀವ ದಹನವಾಗಿರುವ ದುರ್ದೈವಿ ವೃದ್ಧ.

ಕಳೆದ ರಾತ್ರಿ ಎಂದಿನಂತೆ ತಮ್ಮ ಮನೆಯಲ್ಲಿ ವೃದ್ಧ ದೊಡ್ಡ ಬಸವಯ್ಯ ಮಲಗಿದ್ದರು. ಆ ಸಂದರ್ಭದಲ್ಲಿ ದೀಪವನ್ನು ಹಚ್ಚಿ ಪಕ್ಕದಲ್ಲಿ ಇಟ್ಟಿದ್ದರೆನ್ನಲಾಗಿದೆ. ದೀಪ ಆಕಸ್ಮಿಕವಾಗಿ ಕೆಳಗೆ ಬಿದ್ದು ಪಕ್ಕದಲ್ಲೇ ಇದ್ದ ತೆಂಗಿನ ಗರಿಗಳಿಗೆ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದ ಪರಿಣಾಮ ನಿದ್ರೆಗೆ ಜಾರಿದ್ದ ದೊಡ್ಡ ಬಸವಯ್ಯ ಮಲಗಿದ್ದ ಸ್ಥಳದಲ್ಲಿ ಸಜೀವ ದಹನವಾಗಿದ್ದಾರೆ.

ಮೃತ ವೃದ್ಧನ ಪತ್ನಿ ಸಂಬಂಧಿಕರ ಮನೆಗೆ ಹೋಗಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಹೇಳಲಾಗಿದೆ.

ಇವರು ವಾಸಿಸುತ್ತಿದ್ದ ಮನೆ ಸಿಮೆಂಟ್ ಇಟ್ಟಿಗೆಯಿಂದ ಅರ್ಧಭಾಗ ನಿರ್ಮಿಸಿದ್ದರೆ, ಉಳಿದ ಅರ್ಧಭಾಗ ತಗಡಿನ ಶೀಟು ಮತ್ತು ತೆಂಗಿನ ಗರಿಗಳಿಂದ ನಿರ್ಮಿಸಲಾಗಿದೆ ಎನ್ನಲಾಗಿದೆ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version