ಎಲ್ಪಿಜಿ ಚಿತಾಗಾರ ಹಾಗೂ ಆಕ್ಸಿಜನ್ ಕನ್ಸೆಂತ್ರೇಟರ್ ಹಸ್ತಾಂತರಿಸಿದ ಸಚಿವ ಜಗದೀಶ್ ಶೆಟ್ಟರ್

 

ಬೆಂಗಳೂರು: ಇಂದು ಮಾನ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್‌ ಶೆಟ್ಟರ್‌ ಅವರು ಬೆಂಗಳೂರು ಛೇಂಬರ್‌ ಆಫ್‌ ಕಾಮರ್ಸ್‌ ಮುಂದಾಳತ್ವದಲ್ಲಿ ವಿವಿಧ ಕಂಪನಿಗಳು ತಮ್ಮ ಸಿಎಸ್‌ಆರ್‌ ಅನುದಾನದ ಅಡಿಯಲ್ಲಿ ನೀಡುತ್ತಿರುವ 2 ಎಲ್‌ಪಿಜಿ ಬಳಸಿ ಶವದಹನ ಮಾಡುವ ಚಿತಾಗಾರಗಳನ್ನು, 5 ದೇಹವನ್ನು ಕಾಪಿಡುವ ಶೈತ್ಯಾಗಾರಗಳನ್ನು, ಐಟಿಐ ಕೋವಿಡ್‌ ಆಸ್ಪತ್ರೆಗೆ 10 ಆಕ್ಸಿಜನ್‌ ಕಾನ್ಸನ್ಟ್ರೇಟರ್‌ ಮತ್ತು ಜಿಗಣಿ ಸರಕಾರಿ ಆಸ್ಪತ್ರೆಗೆ ಆಮ್ಲಜನಕ ಉತ್ಪಾದನಾ ಘಟಕವನ್ನು ಇಂದು ಬಿಬಿಎಂಪಿ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಬಿಸಿಐಸಿ ಯ ಅಧ್ಯಕ್ಷರಾದ ಪರುಶುರಾಮನ್‌, ಉಪಾಧ್ಯಕ್ಷರಾದ ಡಾ. ಎಲ್‌ ರವೀಂದ್ರನ್‌, ಹಿರಿಯ ಉಪಾಧ್ಯಕ್ಷರಾದ ಕೆ ಆರ್‌ ಶೇಖರ್‌, ಟಯೋಟಾ ಕಿರ್ಲೋಸ್ಕರ್‌ ಆಟೋ ಪಾರ್ಟ್ಸ್‌ನ ಜನರಲ್ ಮ್ಯಾನೇಜರ್ ನಾಗರಾಜ್‌, ಟಿಐಇಐ ವೈಸ್ ಪ್ರೆಸಿಡೆಂಟ್ ಅಮಿತ್‌ ಜೈನ್‌, ನಿರ್ದೇಶಕ ರಾದ ಪರಮೇಶ್ವರನ್‌, ಬಿಸಿಐಸಿ ಹಿಂದಿನ ಅಧ್ಯಕ್ಷೆ ಇಂದಿರಾ ಪ್ರೇಮ್‌ ಮೆನನ್‌ ಮತ್ತು ನಿವೃತ್ತ ಐಎಎಸ್‌ ಅಧಿಕಾರಿ ವಿದ್ಯಾಶಂಕರ್‌ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version