ಪ್ರಗತಿಪರ ಚಿಂತಕ ಕೆ .ಎಸ್ .ಭಗವಾನ್ ಮುಖಕ್ಕೆ ಮಸಿ ಎರಚಿದ ವಕೀಲೆ 

ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರ – ಪ್ರಗತಿಪರ ಚಿಂತಕ ಕೆ .ಎಸ್ .ಭಗವಾನ್ ಮುಖಕ್ಕೆ ಮಸಿ ಎರಚಿದ ವಕೀಲೆ

 

 

ಬೆಂಗಳೂರು : ಸಾಹಿತಿ ಪ್ರಗತಿಪರ ಚಿಂತಕ ಕೆ ಎಸ್ ಭಗವಾನ್ ಮುಖಕ್ಕೆ ಮಸಿ ಬಳಿದಿರುವ ಘಟನೆ ಬೆಂಗಳೂರಿನ ಎರಡನೇ ಎಸಿಎಂಎಂ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.ವಕೀಲೆ ಮೀರಾ ರಾಘವೇಂದ್ರ ರಿಂದ ಭಗವಾನ್ ಮುಖಕ್ಕೆ ಮಸಿ ಬಳಿದಿದ್ದಾರೆ.ಭಗವಾನ್ ಹಿಂದೂ ವಿರೋಧಿ ಹೇಳಿಕೆ ಮೇಲೆ ವಕೀಲೆ ಖಾಸಗಿ ದೂರು ದಾಖಲಿಸಿದ್ದರು.ಹಾಗಾಗಿ ಇಂದು 2ನೇ ACMM ನ್ಯಾಯಾಲಯಕ್ಕೆ ಭಗವಾನ್ ಅವರು ಹಾಜರಾಗಿದ್ರು.ನ್ಯಾಯಾಲಯದ ಮುಂದೆ ಹಾಜರಾಗಿ ವಾಪಾಸ್ ಬರುವ ವೇಳೆ ವಕೀಲೆ ಏಕಾಏಕಿ ಭಗವಾನ್ ಮುಖಕ್ಕೆ ಮಸಿ ಬಳಿದಿದ್ದಾರೆ.ನ್ಯಾಯಾಲಯದ ಒಳಾಂಗಣದಲ್ಲೇ ಮುಖಕ್ಕೆ ಮಸಿ ಬಳೆದ ವಕೀಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆ ಎಸ್ ಭಗವಾನ್ ಮುಖಕ್ಕೆ ಮಸಿ ಬಳೆದ ಹಿನ್ನೆಲೆ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಲು ಹೋಗಿದ್ದಾರೆ.ವಕೀಲೆ ಮೀರಾ ರಾಘವೇಂದ್ರ ವಿರುದ್ಧ ಭಗವಾನ್ ದೂರು ದಾಖಲಿಸಿದ್ದಾರೆ. ಭಗವಾನ್ ಗೆ ನ್ಯಾಯಾಲಯ ಜಾಮೀನು ಇದರಿಂದ ಆಕ್ರೋಶಗೊಂಡ ವಕೀಲೆ ಈ ರೀತಿ ನೀಡಿತ್ತು.ಹಾಗಾಗಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ದಾಖಲಿಸುತ್ತಿದ್ದಾರೆ.ವಕೀಲೆ ಮೀರಾ ರಾಘವೇಂದ್ರ ಭಗವಾನ್ ಮುಖಕ್ಕೆ ಮಸಿ ಬಳೆದ ಹಿನ್ನೆಲೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಕೆ ಎಸ್ ಭಗವಾನ್ ತೆರಳಿದ್ದಾರೆ.ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಭಗವಾನ್ ಮೈಸೂರು‌ ಕಡೆ ವಾಪಸ್ ನಡೆದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version