ಬೆಂಗಳೂರು ಅಪಘಾತದಲ್ಲಿ ಮೃತಪಟ್ಟ 7 ಮಂದಿಯಲ್ಲಿ ಶಾಸಕರ ಪುತ್ರನೂ ಸಾವು, ತಂದೆಗೇ ಇನ್ನೂ ಮಾಹಿತಿ ಇಲ್ಲ..?

ಬೆಂಗಳೂರು ಅಪಘಾತದಲ್ಲಿ ಮೃತಪಟ್ಟ 7 ಮಂದಿಯಲ್ಲಿ ಶಾಸಕರ ಪುತ್ರನೂ ಸಾವು, ತಂದೆಗೇ ಇನ್ನೂ ಮಾಹಿತಿ ಇಲ್ಲ..?

 

ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಭೀಕರ ಅಪಘಾತ ಪ್ರಕರಣದಲ್ಲಿ ಮೃತಪಟ್ಟ ಕರುಣಸಾಗರ್ ಡಿಎಂಕೆ ಶಾಸಕ ವೈ. ಪ್ರಕಾಶ್ ಅವರ ಪುತ್ರರಾಗಿದ್ದಾರೆ

ತಮಿಳುನಾಡಿನ ಹೊಸೂರು ಕ್ಷೇತ್ರದ ಡಿಎಂಕೆ ಪಕ್ಷದ ಶಾಸಕ ವೈ. ಪ್ರಕಾಶ್ ಅವರ ಪುತ್ರರಾಗಿರುವ ಕರುಣಾಸಾಗರ್ ನಿನ್ನೆ ಸಂಜೆ 5.30 ಕ್ಕೆ ಬೆಂಗಳೂರಿಗೆ ಆಗಮಿಸಿದ್ದರು. ಕಟ್ಟಡ ನಿರ್ಮಾಣ ಸಾಮಗ್ರಿ ಖರೀದಿಸಲು ಬೆಂಗಳೂರಿಗೆ ಬಂದಿದ್ದ ಅವರು ಬೆಂಗಳೂರಿನಲ್ಲಿಯೇ ಬಹುತೇಕ ವ್ಯವಹಾರಗಳನ್ನು ಮಾಡುತ್ತಿದ್ದರು.

 

ನಿನ್ನೆ ರಾತ್ರಿ ಕರುಣಾಸಾಗರ್ ಗೆ ಕುಟುಂಬದವರು ಕರೆ ಮಾಡಿ ಮನೆಗೆ ಊಟಕ್ಕೆ ಬರುತ್ತಿಯಾ ಎಂದು ಕೇಳಿದ್ದು, ಈಗ ಬರುವುದಿಲ್ಲ ಎಂದು ತಿಳಿಸಿದ್ದರೆನ್ನಲಾಗಿದೆ.

ಅಪಘಾತದಲ್ಲಿ ಕರುಣಸಾಗರ್ ಮೃತಪಟ್ಟ ಮಾಹಿತಿಯನ್ನು ಪೊಲೀಸರು ಅವರ ಕುಟುಂಬದವರಿಗೆ ತಿಳಿಸಿದ್ದಾರೆ. ಅವರ ಬಂಧುಗಳು ಸೇಂಟ್ ಜಾನ್ಸ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಆದರೆ, ಶಾಸಕ ಪ್ರಕಾಶ್ ಅವರಿಗೆ ಇನ್ನೂ ಅಪಘಾತದಲ್ಲಿ ಮಗ ಮೃತಪಟ್ಟ ಮಾಹಿತಿ ನೀಡಿಲ್ಲ ಎನ್ನಲಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version