ಪತ್ರಿಕಾ ವಿತರಕರಿಗೆ ದಿನಸಿ ಕಿಟ್ ವಿತರಣೆ.

 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕ ವತಿಯಿಂದ ಪತ್ರಿಕಾ ವಿತರಕರಿಗೆ ಆಹಾರ ಕಿಟ್ ವಿತರಣೆ ಹಾಗೂ ಶ್ರದ್ಧಾಂಜಲಿ ಸಭೆ ನಡೆಯಿತು. ಇತ್ತೀಚಿಗೆ ನಿಧನರಾದ ಗುಬ್ಬಿ ತಾಲ್ಲೂಕು  ಪತ್ರಿಕಾ ವರದಿಗಾರರಾದ ಶ್ರೀ ಸಂಜೀವಯ್ಯರವರ ಅಕಾಲಿಕ ನಿಧನ ಹೊಂದಿದ್ದರು ಅವರ ಶ್ರದ್ಧಾಂಜಲಿ ಸಭೆ ನೆರವೇರಿತು .

ಪಾವಗಡ ರಾಮಕೃಷ್ಣ ಆಶ್ರಮದ ಜಪಾನಂದ ಸ್ವಾಮೀಜಿ ಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು ನಂತರ ಸ್ವಾಮೀಜಿ ಅವರ ನೇತೃತ್ವದಲ್ಲಿ ಸುಮಾರು 200 ಜನ ಪತ್ರಿಕಾ ವಿತರಕರಿಗೆ ಆಹಾರದ ಕಿಟ್ ಗಳ ವಿತರಣೆಯನ್ನು ನೆರವೇರಿಸಲಾಯಿತು .

 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶಿವಾನಂದ ತಗಡೂರು ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ನಂತರ ಮಾತನಾಡುತ್ತಾ ರಾಜ್ಯದಲ್ಲಿ ಕೋವಿಡ 19 ರಿಂದ

31ಪತ್ರಕರ್ತರು ಮರಣ ಹೊಂದಿದ್ದರೂ ಸರಕಾರದಿಂದ ಅವರಿಗೆ ತಲಾ 5ಲಕ್ಷ ರೂಪಾಯಿಗಳಂತೆ ಸರ್ಕಾರದಿಂದ ಪರಿಹಾರ ಧನವನ್ನು ಮಂಜೂರು ಮಾಡಿ ನೀಡಲಾಗಿತ್ತು ಗುಬ್ಬಿ ಪ್ರಜಾಪ್ರಗತಿಯ ಗುಬ್ಬಿ ಪ್ರಜಾವಾಣಿಯ ವರದಿಗಾರರಾಗಿ ಜಯಣ್ಣನವರು ಕಾರ್ಯದರ್ಶಿ ಕಾರ್ಯನಿರ್ವಹಿಸುತ್ತಿದ್ದು ಅವರ ನಿಧನದಿಂದ ರಾಜ್ಯ ಸರ್ಕಾರವು 5ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿತ್ತು ಮತ್ತು ಅವರ ಕುಟುಂಬ ವರ್ಗದವರಿಗೆ ಮನೆಯನ್ನು ಮಂಜೂರು ಮಾಡಲು ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು ಅದೂ ಸಹ ಆಗಲಿದೆ ಎಂದು ತಿಳಿಸಿದರು ನಂತರ ಕುಣಿಗಲ್ ಕುಣಿಗಲ್ ತಾಲ್ಲೂಕು ಸಂಯುಕ್ತ ಕರ್ನಾಟಕ ವರದಿಗಾರ ರಾದ ಶ್ರೀ ಫಯಾಜರವರೆಗೆ ರಾಜ್ಯ ಸಂಘದಿಂದ ಹಾಗೂ ತಾಲ್ಲೂಕು ಸಂಘ ಜಿಲ್ಲಾ ಸಂಘದಿಂದ ಪರಿಹಾರದ ಹಣವನ್ನು ನೀಡಲಾಯಿತು

ತಿಪಟೂರಿನ ಹಳ್ಳಿ ಸುರೇಶ್ ರವರು ಅಕಾಲಿಕ ಮರಣದಿಂದ ಅವರಿಗೂ ಸಹ ರಾಜ್ಯ ಸಂಘ ಮತ್ತು ತಾಲ್ಲೂಕು ಸಂಘದ ಜಿಲ್ಲಾ ಸಂಘ ಸಹಕಾರದೊಂದಿಗೆ ಪರಿಹಾರದ ಹಣವನ್ನು ಅವರ ಕುಟುಂಬಕ್ಕೆ ನೀಡಲಾಯಿತು

ಶ್ರೀಯುತ ಸಂಜೀವಯ್ಯನವರು ನಿಧನದಿಂದ ತುಂಬಲಾರದ ನಷ್ಟವಾಗಿದೆ ಗ್ರಾಮೀಣ ಭಾಗದ ಪತ್ರಕರ್ತರಿಗೆ ರಾಜ್ಯ ಸಂಘದಿಂದ ಹಾಗೂ ರಾಜ್ಯ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಪರಿಹಾರವನ್ನು ಸರ್ವ ಪ್ರಯತ್ನ ಮಾಡಿ ಮಂಜೂರು ಮಾಡಿಸಿಕೊಡುವುದಾಗಿ ತಿಳಿಸಿದರು .ತುಮಕೂರಿನ ಪತ್ರಿಕಾ ವಿತರಕ ಹುಡುಗರಿಗೆ ಆಹಾರದ ಕಿಟ್ಗಳನ್ನು ವಿತರಣೆ ಮಾಡಲಾಯಿತು .ಕಾರ್ಯಕ್ರಮದಲ್ಲಿ ಪ್ರಜಾಪ್ರಗತಿ ಸಂಪಾದಕರಾದ ಎಸ್ ನಾಗಣ್ಣನವರು ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ

ಶ್ರೀ ಚಿ.ನಿ. ಪುರುಷೋತ್ತಮ್ ಅವರು ಜಿಲ್ಲಾ ಸಂಘದಿಂದ ವಿವಿಧ ಸೌಲಭ್ಯ ಮತ್ತು ಸವಲತ್ತುಗಳ ವಿವರಗಳನ್ನು ಮತ್ತು ಮನವಿಗಳನ್ನು ಜಿಲ್ಲಾ ಸಂಘದ ಅಧ್ಯಕ್ಷರು ಸಭೆಯಲ್ಲಿ ಮಂಡಿಸಿದರು .ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ರಂಗರಾಜ್ ರವರು

ಆಶ್ರಮದ  ಭಕ್ತರು ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರಾದ ಶ್ರೀಯುತ ಮಂಜುನಾಥ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಆರ್ ನಾಗರಾಜು ಭಾಗವಹಿಸಿದ್ದರು .ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾದ ರಘು ಹಾಗೂ ಇತರೆ ಪದಾಧಿಕಾರಿಗಳು ಭಾಗವಹಿಸಿದ್ದರು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಯುತ ಈಶ್ವರ್ ರಘುರಾಮ್ ಹಾಗೂ ರಂಗನಾಥ್ ರವರು ಭಾಗವಹಿಸಿದ್ದರು .

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version