ಕೊಲೆಯಾದ ಮಹಿಳೆಯ ಶವ ಹುಡುಕುವ ವೇಳೆ ಮತ್ತೊಬ್ಬ ವೃದ್ಧನ ಶವ ಪತ್ತೆ……?

ಕೊಲೆಯಾದ ಮಹಿಳೆಯ ಶವ ಹುಡುಕುವ ವೇಳೆ ಮತ್ತೊಬ್ಬ ವೃದ್ಧನ ಶವ ಪತ್ತೆ……?

 

ತುಮಕೂರು_ಹಣದ ವಿಷಯಕ್ಕೆ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ನಡೆದಿದ್ದು ಕೊಲೆಯಾದ ಮಹಿಳೆಯ ಶವ ಹುಡುಕುವ ವೇಳೆ ತುಮಕೂರಿನ ಗ್ರಾಮಾಂತರ ದೊಡ್ಡಸರಂಗಿ ಬಳಿ ಮಾತೊಂದು ಶವ ಪತ್ತೆಯಾಗಿದ್ದು ಇದು ಕೊಲೆಯೋ ಆತ್ಮಹತ್ಯೆಯೋ ಎನ್ನುವ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.

 

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ವದಲೂರು ಗ್ರಾಮದಲ್ಲಿ ಕೊಲೆ ನಡೆದಿದ್ದು ಕೊಲೆಯಾದ ಮಹಿಳೆಯನ್ನು ಕಲಾವತಿ (40)ಎಂದು ಗುರುತಿಸಲಾಗಿದೆ.

 

ಹೆಗ್ಗೆರೆ ಗ್ರಾಮದ ಗಜೇಂದ್ರ ಮಹಿಳೆಯನ್ನು ಕೊಲೆ ಮಾಡಿ ನಂತರ ಹೇಮಾವತಿ ನಾಲೆಗೆ ಎಸೆದಿದ್ದ. ಮೃತ ಕಲಾವತಿ ತುಮಕೂರಿನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು .

 

ಗಾರ್ಮೆಂಟ್ಸ್ ನಲ್ಲಿ ಪರಿಚಯವಾಗಿದ್ದ ಗಜೇಂದ್ರ ಹಾಗೂ ಮೃತ ಮಹಿಳೆ ಕಲಾವತಿಗೆ ಹಣದ ವ್ಯವಹಾರ ವಿತ್ತು ಎಂದು ತಿಳಿದುಬಂದಿದೆ. ಇನ್ನು ಕೊಲೆಯಾಗಿರುವ ಮಹಿಳೆ ಕಲಾವತಿ ಗಜೇಂದ್ರನಿಗೆ ನೀಡಿದ ಹಣವನ್ನು ವಾಪಸ್ ಕೇಳಿದ ವಿಚಾರಕ್ಕೆ ಗಲಾಟೆ ನಡೆದು ಮಹಿಳೆಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

 

 

ಇನ್ನು ಮೃತ ಮಹಿಳೆಯ ಶವ ಹುಡುಕುವ ವೇಳೆ ಮತ್ತೋರ್ವ ಪುರುಷನ ಶವ ಪತ್ತೆಯಾಗಿದ್ದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

 

 

 

ಕಳೆದ ಕೆಲ ದಿನಗಳ ಹಿಂದೆ ಮೃತಪಟ್ಟಿರುವ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಗುಬ್ಬಿ ತಾಲೂಕಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಮಹಿಳೆಯನ್ನು ಹುಡುಕಲು ಹೊರಟ ಪೊಲೀಸರಿಗೆ ಸಿಕ್ಕಿರುವುದು ಪುರುಷನ ಶವ ಹಾಗೂ ಇನ್ನು ಕೊಲೆಯಾಗಿರುವ ಕಲಾವತಿಯವರ ಮೃತದೇಹ ಇನ್ನೂ ಸಿಗದೆ ಇರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿದೆ.

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version