ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಮಾಜಿ ಸಚಿವ ಸೊಗಡು ಶಿವಣ್ಣ ಸಾಂಗ್….

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಮಾಜಿ ಸಚಿವ ಸೊಗಡು ಶಿವಣ್ಣ ಸಾಂಗ್….

 

 

 

ತುಮಕೂರು – ತುಮಕೂರು ಕಂಡ ಸಜ್ಜನಿಕೆ ರಾಜಕಾರಣಿಗಳಲ್ಲಿ ಒಬ್ಬರಾದ ಮಾಜಿ ಸಚಿವರು ಹಾಗೂ ತುಮಕೂರು ನಗರದ ಮಾಜಿ ಶಾಸಕ ಸೊಗಡು ಶಿವಣ್ಣ ರವರ ಜೀವನದ ಸಂದೇಶ ಸಾರುವ ಗೀತ ರಚನೆ ಮಾಡುವ ಮೂಲಕ ತುಮಕೂರಿನ ಯುವಕರು ಎಲ್ಲರ ಹುಬ್ಬಿರುವಂತೆ ಮಾಡಿದ್ದಾರೆ.

 

 

 

 

ಇನ್ನು ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವಾಗಲೇ ಶತಾಯಗತಾಯ ಮುಂಬರುವ ಚುನಾವಣೆಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆದು ಚುನಾವಣೆಗೆ ನಿಲ್ಲಲೇ ಬೇಕು ಎಂದು ಹಠಕ್ಕೆ ಬಿದ್ದಿರುವ ಸೊಗಡು ಶಿವಣ್ಣ ಒಂದೆಡೆ ಪ್ರಚಾರ ಆರಂಭಿಸಿದ್ದರೆ ಮತ್ತೊಂದೆಡೆ ಅವರ ಅಭಿಮಾನಿಗಳಾದ ಸೈಯದ್ ಅಬೂ ಸಯೀದ್, ಮೊಹಮ್ಮದ್ ಖಾಲಿದ್, ಸೈಯದ್ ಮುದಾಸಿರ್, ಅಭಿಷೇಕ್ ಹಾಗೂ ಡೇನಿಯಲ್ ರವರು ಮಾಜಿ ಸಚಿವ ಸೊಗಡು ಶಿವಣ್ಣರ ಗೀತಾ ರಚನೆ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

 

ಇನ್ನು “ರೈತನ ಮಗನಿವನು” ಎನ್ನುವ ಶೀರ್ಷಿಕೆಯ ಅಡಿ ಹಾಡೊಂದನ್ನ ಬರೆದು ತಮ್ಮದೇ ಆದ ಶೈಲಿಯಲ್ಲಿ ಹಾಡನ್ನು ಹಾಡಿರುವ ಸಿಂಗರ್ ಖಾಲಿದ್ ರವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು.

 

 

 

 

ಬದಲಾದ ಸನ್ನಿವೇಶದಲ್ಲಿ ಹಿಂದಿನ ರಾಜಕೀಯ ಚಿತ್ರಣ ಸಂಪೂರ್ಣ ಹದಗೆಟ್ಟಿದ್ದು ತುಮಕೂರು ನಗರಕ್ಕೆ ಒಬ್ಬ ಉತ್ತಮ ಸರಳ ಸಜ್ಜನಿಕೆಯ ಜನಪ್ರತಿನಿಧಿಯ ಅವಶ್ಯಕತೆ ಇದ್ದು ಅದರಂತೆ ನಾವು ಕಳೆದ 20 ವರ್ಷದಿಂದ ಮಾಜಿ ಸಚಿವ ಸೊಗಡು ಶಿವಣ್ಣರ ಅಭಿಮಾನಿಯಾಗಿದ್ದು ಅವರನ್ನು ತೀರ ಹತ್ತಿರದಿಂದ ಬಲ್ಲವರಾಗಿದ್ದೇವೆ ಅಂತಹ ಜನಪ್ರತಿನಿಧಿಯ ಅವಶ್ಯಕತೆ ತುಮಕೂರು ನಗರಕ್ಕೆ ಇದೆ ಹಲವು ಸಂದರ್ಭದಲ್ಲೇ ಸೊಗಡು ಶಿವಣ್ಣ ರವರು ಜಾತಿ ಧರ್ಮ ಭೇದ ಭಾವ ಬಿಟ್ಟು ಎಲ್ಲಾ ವರ್ಗದ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವ ವ್ಯಕ್ತಿ ಸೊಗಡು ಶಿವಣ್ಣ ಹಾಗಾಗಿ ಅವರ ಅಭಿಮಾನಕ್ಕಾಗಿ ನಾವು ನಮ್ಮ ಸಂಗಡಿಗರು ಗೀತರ ರಚನೆ ಮಾಡಿದ್ದೇವೆ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

 

 

 

 

 

ಇನ್ನು “ರೈತನ ಮಗನಿವನು ” ಹಾಡನ್ನು ಶುಕ್ರವಾರ ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ಬಿಡುಗಡೆ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸೊಗಡು ಶಿವಣ್ಣರ ಹಾಡು ಸಂಪೂರ್ಣ ವೈರಲ್ ಆಗಿದೆ.

 

 

 

 

 

ಇನ್ನು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಮುದಾಸಿರ್, ಕೆ ಪಿ ಮಹೇಶ್ ,ಜೈಪ್ರಕಾಶ್ ,ಮೊಹಮದ್ ಖಾಲಿದ್,ಶಿವರಾಜು ,ಗೋಕುಲ್ ಸೇರಿದಂತೆ ಹಲವರು ಹಾಜರಿದ್ದರು.

 

 

ವರದಿ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version