ಪಕ್ಷದಲ್ಲಿರುವ ಮುಖಂಡರನ್ನು ಉಪಯೋಗಿಸಿಕೊಂಡು ಸಿಪ್ಪೆಯಂತೆ ಎಸೆಯುವ ಪ್ರವೃತ್ತಿ ದೇವೇಗೌಡರದ್ದು_ ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ.

ಪಕ್ಷದಲ್ಲಿರುವ ಮುಖಂಡರನ್ನು ಉಪಯೋಗಿಸಿಕೊಂಡು ಸಿಪ್ಪೆಯಂತೆ ಎಸೆಯುವ ಪ್ರವೃತ್ತಿ ದೇವೇಗೌಡರದ್ದು_ ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ.

ಜೆಡಿಎಸ್ ವರಿಷ್ಠ ದೇವೇಗೌಡರು ಜೆಡಿಎಸ್ ಪಕ್ಷದಲ್ಲಿರುವ ಮುಖಂಡರನ್ನು ಅವರಿಗೆ ಬೇಕಾದಂತೆ ಉಪಯೋಗಿಸಿಕೊಂಡು ನಂತರ ಅವರನ್ನು ಸಿಪ್ಪೆ ಎಸೆಯುವಂತೆ ಎಸೆಯುವುದು ಅವರ ಪ್ರವೃತ್ತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

 

ಇಂದು ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಪ್ರತಿಕ್ರಿಯಿಸಿದ ಅವರು ಜೆಡಿಎಸ್ ವರಿಷ್ಠರು ಮುಖಂಡರನ್ನು ಉಪಯೋಗಿಸಿಕೊಂಡು ಆಚೆ ಹಾಕೋದು ಅವರ ಪ್ರವೃತ್ತಿ ನಾನು ಕೂಡ ಜೆಡಿಎಸ್ ಪಕ್ಷದಲ್ಲಿದ್ದಾಗ ನನ್ನ ಮೇಲೆ ಕೂಡ ಸಿದ್ದರಾಮಯ್ಯ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೊರ ಹೋಗಿದ್ದಾರೆ ಎಂದು ಹೇಳಿಕೊಂಡಿದ್ದರು ಆದರೆ ಅದೆಲ್ಲವೂ ಸುಳ್ಳು ನಾನು ಅಹಿಂದ ಸಮಾವೇಶವನ್ನು ಮಾಡಲು ಹೊರಟಾಗ ಅದಕ್ಕೆ ಜೆಡಿಎಸ್ ವರಿಷ್ಠರು ಸಮಾವೇಶವನ್ನು ಮಾಡಬೇಡಿ ಎಂದು ತಡೆಹಿಡಿದರು .ಆದರೆ ನಾನು ಕೂಡ ಅವರನ್ನು ಅಹಿಂದ ಸಮಾವೇಶಕ್ಕೆ ಬರಲು ತಿಳಿಸಿದನು ಆದರೆ ಅದಕ್ಕೆ ಒಪ್ಪದೆ ಅವರು ತನ್ನನ್ನು ಪಕ್ಷದಿಂದ ಹೊರ ಹಾಕಿದ್ದಾರೆ ಎಂದು ಜೆಡಿಎಸ್ ಪಕ್ಷ ಹಾಗೂ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 

ಅಂದು ತಾನು ಅಹಿಂದ ಸಮಾವೇಶ ಮಾಡಲು ಹೋದಾಗ ನಾನು ಕೂಡ ದೇವೇಗೌಡರವರೊಂದಿಗೆ ಕುಳಿತು ಚರ್ಚಿಸಿದೆ ತಾನು ಮಾಡುವ ಅಹಿಂದ ಸಮಾವೇಶದಿಂದ ಏನು ಸಮಸ್ಯೆ ಎಂದು ಕೇಳಿದ್ದೆ ಅದನ್ನು ನಿಲ್ಲಿಸಿ ಎಂದು ಒತ್ತಡ ಹಾಕಿದರು ಯಾರು ಏನೇ ಹೇಳಿದರೂ ನಾನು ಸಮಾವೇಶ ಮಾಡಿಯೇ ಸಿದ್ದ ಎಂದು ತಿಳಿಸಿದ ಕೂಡಲೇ ಪಕ್ಷದಿಂದ ಹೊರಹಾಕಿದರು ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version