ವಿಧಾನಸಭೆ ಉಪಚುನಾವಣೆ; ಎರಡು ಕ್ಷೇತ್ರಗಳಲ್ಲಿ ಬಿಜೆಪಿಗೆ ನೂರಕ್ಕೆ ನೂರು ಗೆಲುವು ಖಚಿತ: ಬಿಎಸ್ ವೈ ವಿಶ್ವಾಸ

ವಿಧಾನಸಭೆ ಉಪಚುನಾವಣೆ; ಎರಡು ಕ್ಷೇತ್ರಗಳಲ್ಲಿ ಬಿಜೆಪಿಗೆ ನೂರಕ್ಕೆ ನೂರು ಗೆಲುವು ಖಚಿತ: ಬಿಎಸ್ ವೈ ವಿಶ್ವಾಸ

ಶಿವಮೊಗ್ಗ: ಉಪಚುನಾವಣೆಯ ಎರಡು ಕ್ಷೇತ್ರದಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

 

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ‌ ಮಾತನಾಡಿದ ಅವರು, ಮೋದಿಯವರ ಕಾರ್ಯ ಹಾಗೂ ನಮ್ಮ ಸರ್ಕಾರದ ಒಳ್ಳೆಯ ಕಾರ್ಯಗಳಿಂದಾಗಿ ಉಪಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದರು.

 

ನಾನು ಹಾಗೂ ವಿಜಯೇಂದ್ರ ಎರಡು ಕ್ಷೇತ್ರದಲ್ಲಿ ಓಡಾಟ ಮಾಡ್ತೇವೆ.ಕೊನೆಯ 2-3 ದಿನ ಎರಡು ಕ್ಷೇತ್ರದಲ್ಲಿ ಸಮಯ ಮಾಡ್ಕೊಂಡು ಪ್ರಚಾರ ಮಾಡುತ್ತೇವೆ.ಬೇರೆಯವರ ಟೀಕೆ ಟಿಪ್ಪಣಿಗೆ ನಾನು ಉತ್ತರ ಕೋಡೊಕೆ ಹೋಗಲ್ಲ ಎಂದರು.

 

ಜನರಿಗೆ ಬೆಲೆ ಏರಿಕೆಯ ಕಾರಣಗಳು ಗೊತ್ತಿದೆ. ವಿಶ್ವಕ್ಕೆ ಗೊತ್ತಿದೆ.ಈ ಕಾರಣ ಇಟ್ಟುಕೊಂಡು ಚುನಾವಣೆಯಲ್ಲಿ ಜನ ಹಿನ್ನಡೆ ಮಾಡ್ತಾರೆ ಎಂದು ನನಗೆ ಅನ್ನಿಸಿಲ್ಲ ಎಂದ ಬಿಎಸ್ವೈ ವಿಶ್ವಾಸ ವ್ಯಕ್ತಪಡಿಸಿದರು.

 

ಆರೆಸ್ಸೆಸ್ ಕುರಿತ ಕುಮಾರಸ್ವಾಮಿ ಹೇಳಿಕೆ‌ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಕುಮಾರಸ್ವಾಮಿ ಅವರ ಹತ್ತಿರ ಮಾತನಾಡುತ್ತೇನೆ. ಬಾಯಿತಪ್ಪಿ ಏನೋ ಎರಡು- ಮೂರು ಮಾತನಾಡಿದ್ದಾರೆ. ಅದು ಅವರ ತಪ್ಪುಗ್ರಹಿಕೆ ಅಗಿರಬಹುದು.ನಾನೇ ಹೋಗಿ ಕುಳಿತು ಅವರ ಬಳಿ ಮಾತನಾಡುತ್ತೇನೆ ಎಂದರು.

 

ಐಟಿ ರೈಡ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳು ಅವರ ಕರ್ತವ್ಯ ಮಾಡಿದ್ದಾರೆ.ಅದನ್ನ ತಡಿಯೋಕೆ ನಾವ್ಯಾರು. ಅವರು ಡ್ಯೂಟಿ ಅವರು ಮಾಡ್ತಾರೆ. ನಮಗೆ ಯಾವುದೇ ತೊಂದರೆ ಇಲ್ಲ ಎಂದರು.

 

ನಮ್ಮ ಕುಟುಂಬದವರಿಗೆ ಯಾವುದೇ ಸಂಬಂಧ ಇಲ್ಲ. ನಾವು ತಪ್ಪು ಮಾಡಿಲ್ಲ.ಅದಕ್ಕೆ ಗೊಂದಲ ಮಾಡಿಕೊಳ್ಳೋ ಅಗತ್ಯವಿಲ್ಲ. ನಿಶ್ಚಿತವಾಗಿ ಯಾವುದೇ ಸಮಸ್ಯೆಯಿಲ್ಲ.ವಿಪಕ್ಷಗಳಿಗೆ ಏನು ಇಲ್ಲ. ಅದಕ್ಕೆ ಈ ವಿಷಯ ಹೇಳ್ತಾರೆ ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version