ಸಾರ್ಥಕ ಬದುಕಿನ ಯಶಸ್ಸಿನ ಗುಟ್ಟು ಬಿಚ್ಚಿಟ್ಟ _ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್.

ಸಾರ್ಥಕ ಬದುಕಿನ ಯಶಸ್ಸಿನ ಗುಟ್ಟು ಬಿಚ್ಚಿಟ್ಟ _ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್.

 

ತುಮಕೂರು_ಪ್ರತಿಯೊಬ್ಬ ಮನುಷ್ಯನು ತನ್ನ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಯಶಸ್ಸು ಗಳಿಸುತ್ತಾನೆ ಆ ಯಶಸ್ಸಿನ ಹಿಂದೆ ಒಂದಲ್ಲ ಒಂದು ಮನಸ್ಸಿನ ಸಹಕಾರ ಇರುತ್ತದೆ ಆದರಂತೆ.

 

 

ಕರ್ನಾಟಕದ ಸಜ್ಜನ ರಾಜಕಾರಣಿ, ಅಜಾತಶತ್ರು ಹಾಗೂ ಕಾಂಗ್ರೆಸ್ ಧುರೀಣ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ .ಜಿ ಪರಮೇಶ್ವರ್ ರವರು ಸಹ ಸ್ವತಹ ತನ್ನ ಜೀವನದ ಸಾಧನೆಯ ಯಶಸ್ಸಿನ ಗುಟ್ಟನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಿದ್ದಾರೆ.

 

 

ಇನ್ನು ಭಾನುವಾರ ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆದ ಡಾಕ್ಟರ್ ಜಿ ಪರಮೇಶ್ವರ್ ರವರ “ಸವ್ಯಸಾಚಿ” ಗೌರವ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತನ್ನ ಯಶಸ್ಸು , ಕೀರ್ತಿ ,ಗೆಲುವು , ಕಷ್ಟ ಸುಖದಲ್ಲಿ ಭಾಗಿಯಗಿ ತನ್ನ ಜೀವನದ ಯಶಸ್ಸಿಗೆ ಕಾರಣರಾದ ಡಾಕ್ಟರ್ ಜಿ ಪರಮೇಶ್ವರ್ ಅವರು ಧರ್ಮಪತ್ನಿ ಕನ್ನೀಕಾಪರಮೇಶ್ವರ್ ರವರಿಗೆ ಸಾವಿರಾರು ಜನರ ಮುಂದೆ ಕೃತಜ್ಞತೆಗಳನ್ನು ಸಲ್ಲಿಸುವ ಮೂಲಕ ಮಾದರಿಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ಧರ್ಮಪತ್ನಿ ಶ್ರೀಮತಿ ಕನಿಕ ಪರಮೇಶ್ವರ್ ಅವರನ್ನು ಕಾರ್ಯಕ್ರಮದಲ್ಲಿ ನೆರೆದಿದ್ದ ಸಾವಿರಾರು ಜನರ ಮುಂದೆ ಕೃತಜ್ಞತೆ ಸಲ್ಲಿಸಿದ ಕ್ಷಣಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು.

 

ತಮ್ಮ ಜೀವನದ ಪ್ರತಿಹಂತದಲ್ಲೂ ತನಗೆ ಬೆಂಬಲವಾಗಿ ತನ್ನ ಕಷ್ಟ ಸುಖದಲ್ಲಿ ಭಾಗಿಯಾಗಿ ಪ್ರತಿಹಂತದಲ್ಲೂ ತನಗೆ ಬೆಂಬಲ ನೀಡಿದ್ದಾರೆ ಎಂದರು.

 

 

 

ಇನ್ನು ತಮ್ಮ ಕೆಲಸದ ಒತ್ತಡದಲ್ಲಿ ಎಷ್ಟೇ ಇದ್ದರೂ ಅದನ್ನೆಲ್ಲಾ ಬದಿಗಿಟ್ಟು ತನ್ನ ಜೀವನದ ಸಾರ್ಥಕ ಮೆಟ್ಟಿಲಿನಂತೆ ಇದ್ದ ಅವರಿಗೆ ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version