ಡಾ. ಪುನೀತ್ ರಾಜಕುಮಾರ್ ಅವರಿಗೆ ವಿನೂತನವಾಗಿ ಗೌರವ ಸಮರ್ಪಿಸಿದ ಮಾಜಿ ಸಚಿವ ಸೋಗಡು ಶಿವಣ್ಣ ಕುಟುಂಬ.

ಡಾ. ಪುನೀತ್ ರಾಜಕುಮಾರ್ ಅವರಿಗೆ ವಿನೂತನವಾಗಿ ಗೌರವ ಸಮರ್ಪಿಸಿದ ಮಾಜಿ ಸಚಿವ ಸೋಗಡು ಶಿವಣ್ಣ ಕುಟುಂಬ.

 

 

ತುಮಕೂರು_ಇಂದು ದಿವಂಗತ ಪುನೀತ್ ರಾಜಕುಮಾರ್ ರವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಹಾಗೂ ಪುನೀತ್ ರಾಜಕುಮಾರ್ ರವರ ಕೊನೆ ಚಿತ್ರ ಗಂಧದಗುಡಿ ತೆರೆಕಂಡಿದ್ದು ರಾಜ್ಯದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಇದರ ನಡುವೆ ತುಮಕೂರು ನಗರ ಮಾಜಿ ಶಾಸಕ ಹಾಗೂ ಸಚಿವರಾದ ಸೊಗಡು ಶಿವಣ್ಣ ರವರ ಕುಟುಂಬದ ವರ್ಗದವರು ದಿವಂಗತ ಪುನೀತ್ ರಾಜಕುಮಾರ್ ರವರ ಸ್ಮರಣಾರ್ಥದಲ್ಲಿ ತುಮಕೂರಿನ ಎಸ್ ಮಾಲ್ ನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಚಲನ ಚಿತ್ರ ವೀಕ್ಷಸಲು ಅನುವು ಮಾಡಿದ್ದಾರೆ ಇದರ ನಡುವೆ ಚಲನಚಿತ್ರ ವೀಕ್ಷಿಸಿದ ಸಾರ್ವಜನಿಕರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸಾರ್ವಜನಿಕರಿಗೆ ಸಸಿಗಳನ್ನ ನೀಡುವ ಮೂಲಕ ವಿಶೇಷವಾಗಿ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಮರ್ಪಿಸಿದ್ದಾರೆ.

 

 

ಇದೆ ವೇಳೆ ಮಾತನಾಡಿರುವ ಸೊಗಡು ಶಿವಣ್ಣರವರ ಪುತ್ರ ಕುಮಾರಸ್ವಾಮಿರವರು ಪುನೀತ್ ರಾಜಕುಮಾರ್ ರವರು ಹಲವು ಸಾಮಾಜಿಕ ಕಾರ್ಯಗಳನ್ನ ಮಾಡುವ ಮೂಲಕ ದೇಶ ,ರಾಜ್ಯದ ಜನತೆಯ ಮನದಾಳದಲ್ಲಿ ಅಚ್ಚಳಿಯದೆ ಉಳಿಯುವ ಅನೇಕ ಕೆಲಸಗಳನ್ನು ಮಾಡಿದ್ದಾರೆ ಹಾಗಾಗಿ ಅವರ ಪರಿಸರ ಪ್ರೇಮ, ಕಾಳಜಿ ನಿಜಕ್ಕೂ ಅವಿಸ್ಮರಣೀಯ ಹಾಗಾಗಿ ಅವರ ನೆನಪಿನಲ್ಲಿ ಸಾರ್ವಜನಿಕರಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಗಿಡಗಳನ್ನು ನೀಡುವ ಮೂಲಕ ಅವರಿಗೆ ಗೌರವ ಸಮರ್ಪಿಸಲಾಗುತ್ತಿದೆ ಎಂದರು.

 

ಇದೇ ವೇಳೆ ತುಮಕೂರಿನ ಹಲವು ಸಾರ್ವಜನಿಕರು ಚಲನಚಿತ್ರ ವೀಕ್ಷಿಸಿದ್ದು ಮಾಜಿ ಸಚಿವರ ಕುಟುಂಬದ ನಡೆಗೆ ಹರ್ಷ ವ್ಯಕ್ತಪಡಿಸಿ ಪುನೀತ್ ರಾಜಕುಮಾರ್ ರವರಿಗೆ ಗೌರವ ಸಮರ್ಪಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version