14 ನೇ ವಾರ್ಡ್ ನ ಜನತೆಗೆ ಪುರಸಭಾ ಸದಸ್ಯ ವೈ.ಆರ್. ರುದ್ರೇಶ್ ರವರಿಂದ ಉಚಿತ ನೀರಿನ ಕ್ಯಾನ್ ವಿತರಣೆ

14 ನೇ ವಾರ್ಡ್ ನ ಜನತೆಗೆ ಪುರಸಭಾ ಸದಸ್ಯ ವೈ.ಆರ್. ರುದ್ರೇಶ್ ರವರಿಂದ ಉಚಿತ ನೀರಿನ ಕ್ಯಾನ್ ವಿತರಣೆ

ದೇವನಹಳ್ಳಿ: ಪಟ್ಟಣದ ಪುರಸಭಾ ವ್ಯಾಪ್ತಿಯ 14 ನೇ ವಾರ್ಡ್ ನಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ಶಾಸಕ ನಿಸರ್ಗ ನಾರಾಯಣ ಸ್ವಾಮಿ ಉದ್ಗಾಘನೆ ಮಾಡಲಿರುವ ಹಿನ್ನೆಲೆ ವಾರ್ಡ್ನಿನ 400 ಕು ಹೆಚ್ಚು ಕುಟುಂಬಗಳಿಗೆ ಉಚಿತವಾಗಿ ನೀರಿನ ಕ್ಯಾನ್ ವಿತರಣೆ ಮಾಡಲಾಗುತ್ತಿದೆ ಎಂದು 14 ನೇ ವಾರ್ಡ್ ನ ಸದಸ್ಯ ವೈ.ಆರ್.ರುದ್ರೇಶ್ ತಿಳಿಸಿದರು.

 

ವಾರ್ಡಿನ ಜನತೆಗೆ ನೀರಿನ ಕ್ಯಾನ್ ವಿತರಣೆ ಮಾಡಿ ಅವರು ಮಾತನಾಡಿ ಸರ್ವಜನಿಕರು ಕುಡಿಯುವ ನೀರಿಗಾಗಿ ಅಕ್ಕ ಪಕ್ಕದ ವಾರ್ಡ್ ಗಳಿಗೆ ತೆರಳಿ ನೀರಿನ ಸಮಸ್ಯೆ ಬಗೆಹರಿಸಲು ವಾರ್ಡ್ ನಲ್ಲಿ ನೀರಿನ ಘಟಕ ಸ್ಥಾಪಿಸಲಾಗಿದ್ದು ಅತಿ ಶೀಘ್ರದಲ್ಲೇ ಘಟಕಕ್ಕೆ ಚಾಲನೆ ನೀಡಲಾಗುವುದು ದಸರಾ ಹಬ್ಬದ ಉಡುಗೊರೆಯಾಗಿ ಪ್ರತಿ ಮನೆಗೆ ಒಂದು ನೀರಿನ ಕ್ಯಾನ್ ವಿತರಣೆ ಮಾಡಲಾಗುತ್ತಿದೆ, ಸಾರ್ವಜನಿಕರು ನೀರಿನು ಪೋಲುಮಾಡದೆ ಮಿತವಾಗಿ ಬಳಸಿ ಹಾಗೂ ಘಟಕದಲ್ಲಿ ಸ್ವಚ್ಚತೆಯನ್ನೂ ಕಾಪಾಡಿ ಕೊಳ್ಳಬೇಕು ಎಂದರು.

 

ಈ ವೇಳೆ ನಗರ್ತ ಸಂಘದ ತಾಲ್ಲೂಕು ಉಪಾಧ್ಯಕ್ಷ ಪ್ರವಿಣ್, ವಾರ್ಡಿನ ಮುಖಂಡರಾದ ಮಲಿಕಾರ್ಜುನ್, ವೈ.ಆರ್. ರಾಜೇಶ್, ಪುನಿತ್, ವಿನೋದ್, ಕಿರಣ್ ಗೌಡ, ವಿನಯ್,ಗಿರೀಶ್,ಟೈಗರ್ ಪುನೀತ್ ಇದ್ದರು

 

ಮಂಜು ಬೂದಿಗೆರೆ

9113813926

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version