ದೇಶದ ನಾಯಕರ ಬಗ್ಗೆ ಹಗುರವಾಗಿ ಯಾರು ಮಾತಾಡಿದರೂ ತಪ್ಪು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ದೇಶದ ನಾಯಕರ ಬಗ್ಗೆ ಹಗುರವಾಗಿ ಯಾರು ಮಾತಾಡಿದರೂ ತಪ್ಪು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು: ದೇಶದ ಯಾವ ನಾಯಕರ ಬಗ್ಗೆಯೂ ಯಾರು ಹಗುರವಾಗಿ ಮಾತ ನಾಡಬಾರದು, ನಮ್ಮ ಎಲ್ಲಾ ನಾಯಕರು ಗೌರವಾನ್ವಿತರೇ ಎನ್ನುವ ಮೂಲಕ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸಿ.ಟಿ.ರವಿ ಅವರನ್ನು ಪರೋಕ್ಷವಾಗಿ ಕುಟುಕಿದ್ದಾರೆ.

 

ಇಂದಿರಾ ಕ್ಯಾಂಟಿನ್ ವಿಚಾರಕ್ಕೆ ಸಿ.ಟಿ.ರವಿ ನೀಡಿರುವ ಹುಕ್ಕಾ ಬಾರ್, ಮದ್ಯ ಸೇವನೆ ಬಗ್ಗೆ ಭಾರೀ ಚರ್ಚೆಯಾಗುತ್ತಿರುವ ಬಗ್ಗೆ ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದ ಎಲ್ಲ ನಾಯಕರೂ ಗೌರವಾನ್ವಿತರೇ ಆಗಿದ್ದಾರೆ. ಎಲ್ಲಾ ನಾಯಕರು ಅವರವರ ಕಾಲ ಘಟ್ಟದಲ್ಲಿ ದೇಶಕ್ಕೆ ಮತ್ತು ಜನತೆಗೆ ಒಳಿತಾಗುವ ಕೆಲಸ ಮಾಡಿದ್ದಾರೆ. ಇದಕ್ಕೆ ಪಕ್ಷ, ಜಾತಿ, ಧರ್ಮದ ಭೇದವಿಲ್ಲ. ಯಾರು ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬಾರದು. ನಮ್ಮ ಎಲ್ಲಾ ನಾಯಕರು ಗೌರವಾನ್ವಿತರು. ಅವರ ಬಗ್ಗೆ ಯಾರೇ ಮಾತನಾಡಿದರೂ ಅದು ತಪ್ಪು. ಹಾಗೆಲ್ಲ ಮಾತನಾಡುವುದು ಸರಿಯಲ್ಲ ಎಂದಷ್ಟೇ ಹೇಳಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version