ಬಂಡಳ್ಳಿ ಗ್ರಾಮದಲ್ಲಿ ಬಿಜೆಪಿ ಭರ್ಜರಿ ಪ್ರಚಾರ : ಪ್ರೀತನ್ ಗೆ ವೆಂಕಟೇಶ್ ಸಾಥ್

ಬಂಡಳ್ಳಿ ಗ್ರಾಮದಲ್ಲಿ ಬಿಜೆಪಿ ಭರ್ಜರಿ ಪ್ರಚಾರ : ಪ್ರೀತನ್ ಗೆ ವೆಂಕಟೇಶ್ ಸಾಥ್

ಹನೂರು :- ವಿಧಾನಸಭಾ ಕ್ಷೆತ್ರ ಬಿಜೆಪಿ ಅಭ್ಯರ್ಥಿ ಪ್ರೀತನ್ ನಾಗಪ್ಪ ಬಂಡಳ್ಳಿ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಪ್ರೀತನ್ ನಾಗಪ್ಪ ಗೆ ಜನಧ್ವನಿ ವೆಂಕಟೇಶ್ ಕೂಡ ಸಾಥ್ ನೀಡಿ ಪ್ರಚಾರದಲ್ಲಿ ತೊಡಗಿದ್ದಾರೆ. ಬಂಡಳ್ಳಿ ಹಾಗೂ ಸುತ್ತಮುತ್ತ ಗ್ರಾಮದ ಬಿಜೆಪಿ ಮುಖಂಡರು ಕಾರ್ಯಕರ್ತರುಗಳು ತೆಳ್ಳನೂರು ರಸ್ತೆಯಿಂದ

 

 

 

 

 

 

 

 

 

ಹನೂರು ಮುಖ್ಯರಸ್ತೆಯಲ್ಲಿ ಡೋಲು ತಮಟೆ ವಾದ್ಯ ಗೋಷ್ಠಿದೊಂದಿಗೆ ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ತೆರೆ ಬೀಳಲಿರುವ ಕಾರಣ ಭರ್ಜರಿ ರೋಡ್ ಶೋ ನಡೆಸಿದ್ದಾರೆ ನಂತರ ಬಂಡಳ್ಳಿ ಗ್ರಾಮದ

 

 

 

 

 

 

 

 

 

ಬಡಾವಣೆಗಳಲ್ಲಿ ತೆರಳಿ ಬಾಬಾಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರ ಕ್ಕೆ ಮಾಲಾರ್ಪಣೆ ಮಾಡಿ ಜೈಭೀಮ್ ಘೋಷಣೆ ಕೂಗುತ್ತ ಪ್ರೀತನ್ ಹಾಗೂ ವೆಂಕಟೇಶ್ ತಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತರು

 

 

 

 

 

 

 

 

 

 

ಬೆಂಬಲಿಗರೊಂದಿಗೆ ಮನೆ ಮನೆ ಪ್ರಚಾರ ನಡೆಸಿ ಈ ಬಾರಿ ಬಿಜೆಪಿ ಪಕ್ಷಕ್ಕೆ ಬೆಂಬಲಿಸಿ ಮತನಿಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ ಬಿಜೆಪಿ ಪಕ್ಷದ ಕಾರ್ಯಕರ್ತರ ವಲಯದಲ್ಲಿ ಜನಧ್ವನಿ ಬಿ ವೆಂಕಟೇಶ್ ಆಗಮನದಿಂದ ಆನೆ ಬಲ ಬಂದಂತಾಗಿದ್ದು ಬಿಜೆಪಿ ಪಕ್ಷದ

 

 

 

 

 

 

 

 

 

 

ಮುಖಂಡರುಗಳಲ್ಲಿ ಈ ಬಾರಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಇದೇ ಸಂದರ್ಭದಲ್ಲಿ ವಿವಿಧ ಗ್ರಾಮದ ಬಿಜೆಪಿ ಪಕ್ಷದ ಮುಖಂಡರುಗಳು ಕಾರ್ಯಕರ್ತರುಗಳು ಮಹದೇವಣ್ಣ. ವೆಂಕಟಾಚಲ.ಹರ್ಷ.ಮಹಾದೇವ. ಹಾಗೂ ಮತ್ತಿತರರು ಭಾಗವಹಿಸಿದ್ದರೂ

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version