ಸಾಲ ಮರುಪಾವತಿ ಸಾಧ್ಯವಾಗದ ಹಿನ್ನೆಲೆ  ತುಮಕೂರಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗೆ ಬೀಗ ಜಡಿದ ಬ್ಯಾಂಕ್ ಅಧಿಕಾರಿಗಳು.

ಸಾಲ ಮರುಪಾವತಿ ಸಾಧ್ಯವಾಗದ ಹಿನ್ನೆಲೆ  ತುಮಕೂರಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗೆ ಬೀಗ ಜಡಿದ ಬ್ಯಾಂಕ್ ಅಧಿಕಾರಿಗಳು.

 

 

ತುಮಕೂರು – ಬ್ಯಾಂಕ್ ನಿಂದ ಪಡೆದ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತುಮಕೂರಿನ ಪ್ರತಿಷ್ಠಿತ ಕಾಲೇಜಿಗೆ ಬ್ಯಾಂಕ್ ನ ಸಿಬ್ಬಂದಿಗಳು ಬೀಗ ಜಡಿದು ಕಾಲೇಜ್ ಅನ್ನು  ಸೀಜ್ ಮಾಡಿರುವ ಘಟನೆ ವರದಿಯಾಗಿದೆ.

 

 

 

 

ತುಮಕೂರಿನ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಇರುವ ತುಮಕೂರಿನ ಹಿರಿಯ ರಾಜಕಾರಣಿ ಹಾಗೂ ಜೆಡಿಎಸ್ ಮುಖಂಡ ಶಫಿ ಅಹಮದ್ ರವರ ಒಡೆತನದ ಹೆಚ್ ಎಂ ಎಸ್ ಪಾಲಿಟೆಕ್ನಿಕ್ ಕಾಲೇಜಿಗೆ ಶನಿವಾರ ಬ್ಯಾಂಕ್ ನ ಸಿಬ್ಬಂದಿಗಳು ಭೇಟಿ ನೀಡಿ ಕೋರ್ಟ್ ನ ಆದೇಶದ ಮೇರೆಗೆ ಕಾಲೇಜಿಗೆ ಬೀಗ ಜಡಿದು ಕಾಲೇಜನ್ನ ಸೀಜ್ ಮಾಡಿದ್ದಾರೆ.

 

 

 

ತುಮಕೂರಿನ ಟಿಜಿಎಂಸಿ ಬ್ಯಾಂಕ್ ನಲ್ಲಿ ಎಚ್ಎಮ್ಎಸ್ ವಿದ್ಯಾ ಸಂಸ್ಥೆಯ  ಚೇರ್ಮನ್ ಶಫಿ ಅಹಮದ್ ರವರು ಒಂದು ಕೋಟಿ ಹಣವನ್ನು ಬ್ಯಾಂಕ್ ನಿಂದ ಸಾಲ ಪಡೆದಿದ್ದು ಬ್ಯಾಂಕಿಗೆ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಬ್ಯಾಂಕ್ ನ  ಅಧಿಕಾರಿಗಳು ಶನಿವಾರ ಕಾಲೇಜಿಗೆ ಭೇಟಿ ನೀಡಿ ಕೋರ್ಟ್ ಸಿಬ್ಬಂದಿಗಳು, ವಕೀಲರು, ಹಾಗೂ ಪೊಲೀಸರ ಬಂದೋ ಬಸ್ತ್ ನಲ್ಲಿ  ಕಾಲೇಜಿಗೆ ಸೀಜ್ ಮಾಡಿ ವಶಕ್ಕೆ ಪಡೆದರು.

 

 

 

ಇದೇ ಸಂದರ್ಭದಲ್ಲಿ ಟಿಜಿಎಂಸಿ ಬ್ಯಾಂಕ್ ನ ಮ್ಯಾನೇಜರ್ ರಾಜಶೇಖರ್, ಹೆಚ್ ಎಂ ಎಸ್ ವಿದ್ಯಾ ಸಂಸ್ಥೆಯ ಚೇರ್ಮನ್ ಶಫಿ ಅಹಮದ್ ಸೇರಿದಂತೆ ಸುಮಾರು ಮೂವತ್ತಕ್ಕೂ ಹೆಚ್ಚು ಬ್ಯಾಂಕ್ ನ ಸಿಬ್ಬಂದಿಗಳು ಹಾಗೂ ಪೊಲೀಸರು ಸ್ಥಳದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version