ಬಾಳೆದಿಂಡಿನ ಈ ಆರೋಗ್ಯ ಲಾಭಗಳನ್ನು ನೀವು ತಿಳಿದುಕೊಳ್ಳಲೇ ಬೇಕು

 

 

ಬಾಳೆಗೆ ಒಂದೇ ಗೊನೆ ಆಡುವವರಿಗೆ ಒಂದೇ ಮಾತು ಎಂಬ ಗಾದೆ ಮಾತಿನಂತೆ, ಬಾಳೆಯ ಎಲೆಗಳು, ಬಾಳೆ ಹೂವು,ಬಾಳೆ ಕಾಯಿ, ಬಾಳೆ ಹಣ್ಣು, ಅದರ ಕಾಂಡ, ಬಾಳೆಯ ದಿಂಡು ಹೀಗೆ ಬಾಳೆಯ ಪ್ರತಿಯೊಂದು ಭಾಗವೂ ಸಹ ಮನುಷ್ಯರಿಗೆ ಒಳ್ಳೆಯ ರೀತಿಯಲ್ಲಿ ಉಪಯೋಗವಾಗುತ್ತದೆ.

 

ರಾತ್ರಿ ಊಟ ಆದ ಮೇಲೆ ಒಂದು ಬಾಳೆ ಹಣ್ಣು ತಿನ್ನು ಎಂದು ಮನೆಯಲ್ಲಿನ ಹಿರಿಯರು ಆಗಾಗ ಹೇಳುತ್ತಿರುವುದು ನೆನಪಿಗೆ ಬರುತ್ತದೆ. ಕಾರಣ ಏನೆಂದರೆ ನಾವು ಆಗ ತಾನೇ ಊಟ ಮಾಡಿರುವುದರಿಂದ ನಾವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣ ಆಗಬೇಕು ಮತ್ತು ಅದರಲ್ಲಿನ ಅನೇಕ ಸತ್ವಗಳು ನಾವು ಮಲಗಿ ನಿದ್ರಿಸುತ್ತಿರಬೇಕಾದರೆ ನಮ್ಮ ದೇಹಕ್ಕೆ ಚೆನ್ನಾಗಿ ಹೀರಿಕೊಳ್ಳಬೇಕು. ಇದಕ್ಕೆಲ್ಲಾ ಬಾಳೆಹಣ್ಣು ಬಹಳ ಸಹಕಾರಿ ಆಗುತ್ತದೆ.

 

ಬಾಳೆದಿಂಡಿನ ಈ ಆರೋಗ್ಯ ಲಾಭಗಳನ್ನು ನೀವು ತಿಳಿದುಕೊಳ್ಳಲೇ ಬೇಕು

 

ಏಕೆಂದರೆ ಅದರಲ್ಲಿ ನಮ್ಮ ದೇಹದ ಜೀರ್ಣಾಂಗದ ವ್ಯವಸ್ಥೆಗೆ ಅಗತ್ಯವಾಗಿ ಬೇಕಾಗಿರುವ ಆರೋಗ್ಯಕರ ಅಂಶಗಳು ಇವೆ ಎಂದು.ಈ ಎಲ್ಲಾ ಅಂಶಗಳ ಜೊತೆಗೆ ಇದು ದೇಹದ ಚರ್ಮಕ್ಕೆ ಮತ್ತು ತಲೆಯ ಕೂದಲಿನ ಒಳ್ಳೆಯ ಬೆಳವಣಿಗೆಗೆ ಸಹ ಒಳ್ಳೆಯದು ಎಂಬುದನ್ನು ಸಾಬೀತು ಮಾಡಿದೆ.

 

ಬಾಳೆಗೆ ಒಂದೇ ಗೊನೆ ಆಡುವವರಿಗೆ ಒಂದೇ ಮಾತು ಎಂಬ ಗಾದೆ ಮಾತಿನಂತೆ, ಬಾಳೆಯ ಎಲೆಗಳು, ಬಾಳೆ ಹೂವು,ಬಾಳೆ ಕಾಯಿ, ಬಾಳೆ ಹಣ್ಣು, ಅದರ ಕಾಂಡ, ಬಾಳೆಯ ದಿಂಡು ಹೀಗೆ ಬಾಳೆಯ ಪ್ರತಿಯೊಂದು ಭಾಗವೂ ಸಹ ಮನುಷ್ಯರಿಗೆ ಒಳ್ಳೆಯ ರೀತಿಯಲ್ಲಿ ಉಪಯೋಗವಾಗುತ್ತದೆ. ಸಾಮಾನ್ಯವಾಗಿ ಬಾಳೆದಿಂಡಿನ ಮಧ್ಯದ ನಾರಿನ ತಿರುಳನ್ನು ಹೊರಗಡೆ ಸಿಪ್ಪೆ ತೆಗೆದು ತಿನ್ನಬಹುದು. ಆಗ ಇದರಲ್ಲಿರುವ ಫೈಬರ್ ಅಂಶ ಹೇರಳವಾಗಿ ನಮ್ಮ ದೇಹ ಸೇರುತ್ತದೆ. ಹಾಗಾದರೆ ಇದುವರೆಗೂ ನಮಗೆ ತಿಳಿಯದ ಬಾಳೆದಿಂಡಿನ ಇನ್ನೂ ಹಲವು ಆರೋಗ್ಯಕ್ಕೆ ಪೂರಕವಾದ ಪ್ರಯೋಜನೆಗಳೇನು ಎಂಬುದನ್ನು ತಿಳಿದುಕೊಳ್ಳಿ

 

ಇದರಲ್ಲಿ ಮನುಷ್ಯನ ದೇಹದ ತೂಕ ಕಡಿಮೆ ಮಾಡುವ ಅದ್ಭುತ ಶಕ್ತಿ ಇದೆ

ಇತ್ತೀಚಿನ ದಿನಗಳಲ್ಲಿ ಸುಮಾರು ೭೦ ರಷ್ಟು ಜನರು ಎದುರಿಸುತ್ತಿರುವುದು ದೇಹದ ಬೊಜ್ಜಿನ ಸಮಸ್ಯೆ. ಅಮೆರಿಕಾದ ಯು ಎಸ್ ಸರ್ಜನ್ ಜನರಲ್ ಘೋಷಿಸಿದ ಪ್ರಕಾರ ಅಲ್ಲಿ ಶೇಖಡಾ 35 ರಷ್ಟು ಮಹಿಳೆಯರು ಮತ್ತು ಶೇಖಡಾ 31 ರಷ್ಟು ಪುರುಷರು ಈಗಾಗಲೇ ದೇಹದಲ್ಲಿ ಅತ್ಯಧಿಕ ಕೊಬ್ಬಿನ ಅಂಶ ಹೊಂದಿ ದಾಖಲೆ ಬರೆದಿದ್ದಾರೆ ಮತ್ತು 6 ರಿಂದ 19 ವರ್ಷದ ಒಳಗಿನ ಶೇಖಡಾ 15 ರಷ್ಟು ಮಕ್ಕಳೂ ಸಹ ಅಷ್ಟು ಚಿಕ್ಕ ವಯಸ್ಸಿಗೆ ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು. ಇನ್ನು ನಮ್ಮ ದೇಶದಲ್ಲೂ ಈ ಸಮಸ್ಯೆ ಹೊರತೇನಲ್ಲ. ಆದರೆ ಇದಕ್ಕೆಲ್ಲಾ ಬಾಳೆ ದಿಂಡಿನಲ್ಲಿ ಪರಿಹಾರ ವಿದೆ. ಏಕೆಂದರೆ ಮೊದಲೇ ಹೇಳಿದಂತೆ ಬಾಳೆಯ ದಿಂಡಿನಲ್ಲಿ ಅಧಿಕವಾಗಿ ನಾರಿನ ಅಂಶ ಇರುವುದರಿಂದ, ಇದನ್ನು ಸೇವಿಸಿ ಇದು ಮನುಷ್ಯನ ಹೊಟ್ಟೆ ಸೇರಿದಾಗ ಹಸಿವೆ ಆಗದಂತೆ ನೋಡಿಕೊಳ್ಳುತ್ತದೆ. ಜೊತೆಗೆ ಆಹಾರದಲ್ಲಿರುವ ಕೊಬ್ಬಿನಂಶವನ್ನು ಹರಿಯುತ್ತಿರುವ ರಕ್ತಕ್ಕೆ ನಿಧಾನವಾಗಿ ಬಿಡುಗಡೆ ಆಗುವಂತೆ ನಿರ್ವಹಣೆ ಮಾಡುತ್ತದೆ. ಜೊತೆಗೆ ಜೀರ್ಣ ಕ್ರಿಯೆಯಲ್ಲಿ ಅತಿ ಹೆಚ್ಚು ಉಪಯೋಗ ಆಗುವ ನಮ್ಮ ಕರುಳಿನ ಚಲನೆಗೂ ಸಹ ಇದು ಉತ್ತೇಜನ ಕೊಟ್ಟು ಆಹಾರ ದಲ್ಲಿನ ಅನೇಕ ಸತ್ವಗಳು ದೇಹ ಸೇರುವಂತೆ ಮಾಡುತ್ತದೆ. ತನ್ನ ಈ ಎಲ್ಲಾ ಕಾರ್ಯಗಳಿಂದ ಬಾಳೆದಿಂಡು ಮನುಷ್ಯನ ದೇಹದ ತೂಕವನ್ನು ಗಣನೀಯವಾಗಿ ನಿಯಂತ್ರಣ ಮಾಡುತ್ತದೆ.

 

ಕಿಡ್ನಿ ಕಲ್ಲುಗಳ ಸಮಸ್ಯೆಯೇ? ಯಾವ ವೈದ್ಯರೂ ಬೇಡ. ಕೇವಲ ಬಾಳೆ ಡಿಂಡಿದ್ದರೆ ಸಾಕು

 

ಹೌದು. ಬಾಳೆ ದಿಂಡಿನಲ್ಲಿ ನಿಮ್ಮ ಮೂತ್ರ ಪಿಂಡದಲ್ಲಿ ಉಂಟಾದ ಕಲ್ಲುಗಳ ರೀತಿಯ ಘನ ವಸ್ತುಗಳನ್ನು ಕರಗಿಸುವ ಅದ್ಬುತ ಶಕ್ತಿಯಿದೆ. ಹೇಗೆಂದರೆ ಬಾಳೆದಿಂಡಿನ ರಸದೊಂದಿಗೆ ಸುಣ್ಣವನ್ನು ಬೆರೆಸಿ ಕುಡಿಯುತ್ತಾ ಬಂದರೆ ಕಿಡ್ನಿಯಲ್ಲಿ ಉಂಟಾಗಿರುವ ಎಂತಹದೇ ಕಲ್ಲುಗಳಾದರೂ ಸಹ ಕರಗಿಹೋಗುತ್ತವೆ. ಅಂದರೆ ಕಿಡ್ನಿ ಕಲ್ಲುಗಳ ಸಮಸ್ಯೆಗೆ ಇದಕ್ಕಿಂತ ಔಷಧಿ ಬೇರೊಂದಿಲ್ಲ. ಇದಕ್ಕೆ ಕಾರಣ ಬಾಳೆದಿಂಡಿನಲ್ಲಿ ಇರುವ ಪೊಟ್ಯಾಶಿಯಂ ಅಂಶ ಮತ್ತು ಡೈ – ಯುರೆಟಿಕ್ ಗುಣ ಲಕ್ಷಣಗಳು ಜೊತೆಗೆ ಸುಣ್ಣದಲ್ಲಿರುವ ಸಿಟ್ರಿಕ್ ಆಮ್ಲದ ಅಂಶ. ಈ ಎರಡೂ ಒಟ್ಟಿಗೆ ಸೇರಿ ಕ್ಯಾಲ್ಸಿಯಂ ಗಂಟುಗಳ ಅಥವಾ ಹರಳುಗಳ ರೀತಿ ಮನುಷ್ಯನ ಮೂತ್ರ ಪಿಂಡದಲ್ಲಿ ಉಂಟಾಗಿರುವ ಕಲ್ಲುಗಳ ರೀತಿಯ ವಸ್ತುಗಳನ್ನು ಕರಗುವಂತೆ ಮಾಡುತ್ತದೆ

 

ಕಿಡ್ನಿ ಕಲ್ಲುಗಳ ಸಮಸ್ಯೆಯೇ? ಯಾವ ವೈದ್ಯರೂ ಬೇಡ. ಕೇವಲ ಬಾಳೆ ಡಿಂಡಿದ್ದರೆ ಸಾಕು

 

ಹೌದು. ಬಾಳೆ ದಿಂಡಿನಲ್ಲಿ ನಿಮ್ಮ ಮೂತ್ರ ಪಿಂಡದಲ್ಲಿ ಉಂಟಾದ ಕಲ್ಲುಗಳ ರೀತಿಯ ಘನ ವಸ್ತುಗಳನ್ನು ಕರಗಿಸುವ ಅದ್ಬುತ ಶಕ್ತಿಯಿದೆ. ಹೇಗೆಂದರೆ ಬಾಳೆದಿಂಡಿನ ರಸದೊಂದಿಗೆ ಸುಣ್ಣವನ್ನು ಬೆರೆಸಿ ಕುಡಿಯುತ್ತಾ ಬಂದರೆ ಕಿಡ್ನಿಯಲ್ಲಿ ಉಂಟಾಗಿರುವ ಎಂತಹದೇ ಕಲ್ಲುಗಳಾದರೂ ಸಹ ಕರಗಿಹೋಗುತ್ತವೆ. ಅಂದರೆ ಕಿಡ್ನಿ ಕಲ್ಲುಗಳ ಸಮಸ್ಯೆಗೆ ಇದಕ್ಕಿಂತ ಔಷಧಿ ಬೇರೊಂದಿಲ್ಲ. ಇದಕ್ಕೆ ಕಾರಣ ಬಾಳೆದಿಂಡಿನಲ್ಲಿ ಇರುವ ಪೊಟ್ಯಾಶಿಯಂ ಅಂಶ ಮತ್ತು ಡೈ – ಯುರೆಟಿಕ್ ಗುಣ ಲಕ್ಷಣಗಳು ಜೊತೆಗೆ ಸುಣ್ಣದಲ್ಲಿರುವ ಸಿಟ್ರಿಕ್ ಆಮ್ಲದ ಅಂಶ. ಈ ಎರಡೂ ಒಟ್ಟಿಗೆ ಸೇರಿ ಕ್ಯಾಲ್ಸಿಯಂ ಗಂಟುಗಳ ಅಥವಾ ಹರಳುಗಳ ರೀತಿ ಮನುಷ್ಯನ ಮೂತ್ರ ಪಿಂಡದಲ್ಲಿ ಉಂಟಾಗಿರುವ ಕಲ್ಲುಗಳ ರೀತಿಯ ವಸ್ತುಗಳನ್ನು ಕರಗುವಂತೆ ಮಾಡುತ್ತದೆ.

 

ಮೂತ್ರನಾಳದ ಸೋಂಕನ್ನು ನಿವಾರಿಸುತ್ತದೆ

 

ಬಾಳೆದಿಂಡಿನಲ್ಲಿ ಮನುಷ್ಯನಿಗೆ ಎದುರಾಗುವ ಮೂತ್ರನಾಳದ ಸೋಂಕನ್ನು ನಿವಾರಣೆ ಮಾಡುವ ಶಕ್ತಿಯಿದೆ. ಏಕೆಂದರೆ ಬಾಳೆಯ ದಿಂಡಿನಲ್ಲಿ ವಿಟಮಿನ್ ‘ ಬಿ6 ‘ ಅಂಶ ಮತ್ತು ಪೊಟ್ಯಾಷಿಯಂ ಅಂಶದ ಜೊತೆಗೆ ಡೈ – ಯುರೆಟಿಕ್ ಗುಣ ಲಕ್ಷಣಗಳು ಒಟ್ಟಿಗೆ ಸೇರಿ ಮೂತ್ರನಾಳದ ಸೋಂಕಿನ ವಿರುದ್ಧ ಹೋರಾಡುತ್ತವೆ ಮತ್ತು ಸೋಂಕು ಹೆಚ್ಚಾಗದಂತೆ ನೋಡಿಕೊಳ್ಳುತ್ತವೆ.

 

ಸಕ್ಕರೆ ಕಾಯಿಲೆಗೆ ಒಳ್ಳೆಯ ಪಾನೀಯ

 

ಬಹಳಷ್ಟು ಮಂದಿಯನ್ನು ಬಿಟ್ಟೂ ಬಿಡದೆ ಕಾಡುವ ಈಗಿನ ಕಾಲದ ಹೆಸರಾಂತ ಖಾಯಿಲೆ ಎಂದರೆ ಅದು ಸಕ್ಕರೆ ಖಾಯಿಲೆ ಅಥವಾ ಮಧುಮೇಹ. ಒಮ್ಮೆ ದೇಹಕ್ಕೆ ಮಧುಮೇಹ ಅಂಟಿತೆಂದರೆ ಮನುಷ್ಯನ ಜೀವನ ಶೈಲಿಯೇ ಬದಲಾಗಿ ಬಿಡುತ್ತದೆ. ಯಾವುದು ತಿಂದರೂ ಹೆಚ್ಚು ಯಾವುದು ತಿಂದರೂ ಕಡಿಮೆ ಎಂಬಂತಾಗುತ್ತದೆ ದೈನಂದಿನ ಜೀವನ. ಮಧುಮೇಹಿ ರೋಗಿಗಳು ತಮ್ಮ ದೇಹದಲ್ಲಿ ಅತಿಯಾದ ಸಕ್ಕರೆ ಅಂಶದಿಂದ ಬಳಲುತ್ತಿದ್ದರೆ, ಬಾಳೆದಿಂಡಿನ ರಸವನ್ನು ” ಸೋಸದೆ ” ಹಾಗೇ ಕುಡಿದರೆ ಅವರ ದೇಹದಲ್ಲಿನ ಸಕ್ಕರೆ ಅಂಶ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬರುತ್ತದೆ. ಏಕೆಂದರೆ ಬಾಳೆ ದಿಂಡಿನ ರಸದಲ್ಲಿ ಯಾವುದೇ ರೀತಿಯ ಸಕ್ಕರೆ ಅಂಶ ಇರುವುದಿಲ್ಲ. ಈ ಕಾರಣದಿಂದ ಬಾಳೆ ದಿಂಡಿನ ರಸ ಕುಡಿದಾಗ ದೇಹದಲ್ಲಿನ ಸಕ್ಕರೆ ಅಂಶ ಕೂಡ ಜಾಸ್ತಿ ಆಗುವುದಿಲ್ಲ. ಜೊತೆಗೆ ಇದರಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವುದರಿಂದ ಮಧುಮೇಹಿಗಳಿಗೆ ಸಹಕಾರಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

 

ಅಸಿಡಿಟಿ ಇದ್ದರೆ ಹೊಂದಿರುವವರು ಒಂದು ಕಪ್ ಬಾಳೆಯ ದಿಂಡಿನ ರಸ ಕುಡಿಯಿರಿ

 

ಅತಿಯಾದ ಹುಲಿ ತೇಗು, ಬಾಯಿಯಲ್ಲಿ ನೀರೂರುವುದು, ಎಷ್ಟೇ ನೀರು ಕುಡಿದರೂ ಶಮನವಾಗದ ಹೊಟ್ಟೆಯುರಿ, ಹೊಟ್ಟೆ ಹಸಿವಾಗದೆ ಇರುವುದು ಮತ್ತು ಎದೆಯಲ್ಲಿ ಸದಾ ಒತ್ತಿದಂತೆ ಆಗುವುದು ಈ ಸಮಸ್ಯೆಯ ಬಹು ಮುಖ್ಯ ಲಕ್ಷಣಗಳು. ಯಾರಿಗಾದರೂ ಈ ರೀತಿಯ ವಿಪರೀತ ಗ್ಯಾಸ್ಟಿಕ್ ಸಮಸ್ಯೆ ಇದ್ದರೆ ಅಂತಹವರು ಬಾಳೆಯ ಹಣ್ಣನ್ನು ಅಥವಾ ಬಾಳೆಯ ದಿಂಡಿನ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಎದೆಯುರಿ, ಹೊಟ್ಟೆ ಉರಿ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಸಹ ಬಗೆಹರಿಸುತ್ತದೆ.

 

ಮಲಬದ್ಧತೆಯ ಸಮಸ್ಯೆ ನಿಯಂತ್ರಣಕ್ಕೆ

 

ಬಾಳೆಯ ದಿಂಡಿನಲ್ಲಿ ಇರುವ ನಾರಿನ ಅಂಶ ಮೊದಲೇ ತಿಳಿಸಿದಂತೆ ಮನುಷ್ಯನ ದೇಹದ ಜೀರ್ಣಾಂಗ ವ್ಯವಸ್ಥೆಗೆ ಬಹಳ ಸಹಕಾರಿ. ವಿಶೇಷವಾಗಿ ನಾರಿನಂಶ ಅಧಿಕವಾಗಿರುವುದರಿಂದ ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತಕ್ಷಣಕ್ಕೆ ಪರಿಹಾರ ದೊರಕಿಸಿಕೊಡುತ್ತದೆ ಮತ್ತು ಎಂತಹದೇ ಅಜೀರ್ಣ ಸಮಸ್ಯೆಯಿಂದ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದ ಪಕ್ಷದಲ್ಲಿ ಆಹಾರವನ್ನು ಸರಿಯಾದ ಕ್ರಮದಲ್ಲಿ ಜೀರ್ಣ ಮಾಡಿ ಮಲಬದ್ಧತೆಯ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಇದರ ನಿರೀಕ್ಷಿತ ಪ್ರತಿಫಲ ಕಾಣಬೇಕಾದರೆ ಅವರೂ ಸಹ ಬಾಳೆ ದಿಂಡಿನ ರಸವನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ.

 

ದೇಹದಲ್ಲಿ ಕಬ್ಬಿಣ ಅಂಶದ ವಿಪರೀತ ಕೊರತೆಯನ್ನು ನೀಗಿಸುತ್ತದೆ

 

ಸಾಮಾನ್ಯವಾಗಿ ಯಾರಾದರೂ ನೋಡಲು ತೀರಾ ಸಣ್ಣಗಿದ್ದರೆ ಅವರು ಕಬ್ಬಿಣ ಅಂಶದ ಕೊರತೆಯಿಂದ ಬಳಲುತ್ತಿರಬಹುದು ಎಂದು ಊಹಿಸಿಕೊಳ್ಳಬಹುದು. ದೇಹದಲ್ಲಿ ಕಬ್ಬಿಣ ಅಂಶದ ಕೊರತೆ ಉಂಟಾದರೆ ಮನುಷ್ಯನ ಪ್ರತಿ ನಿತ್ಯದ ಚಟುವಟಿಕೆಗಳಿಗೆ ಬಹಳ ತೊಂದರೆ ಉಂಟು ಮಾಡುತ್ತದೆ. ಅಂತಹವರು ಸಮತೋಲನ ಕಾಪಾಡಿಕೊಳ್ಳಲು ಕಬ್ಬಿಣ ಅಂಶ ಹೆಚ್ಚಿರುವ ಆಹಾರಗಳ ಅಂದರೆ ಹಸಿರು ಎಲೆ ತರಕಾರಿಗಳು, ಬೀನ್ಸ್, ಕಾಳುಗಳು, ದ್ವಿದಳ ಧಾನ್ಯಗಳ ಸೇವನೆ ಮಾಡಬೇಕಾಗುತ್ತದೆ. ಆದರೆ ಬಾಳೆದಿಂಡಿನ ರಸದಲ್ಲಿ ಕೂಡ ಯಥೇಚ್ಛವಾಗಿ ಕಬ್ಬಿಣ ಮತ್ತು ವಿಟಮಿನ್ ‘ ಬಿ6 ‘ ಅಂಶ ಇರುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಅಂಶದ ಮಟ್ಟವನ್ನು ಹೆಚ್ಚು ಮಾಡುತ್ತದೆ ಮತ್ತು ಬಾಳೆ ದಿಂಡು ಒಂದೇ ಮೇಲಿನ ಎಲ್ಲಾ ರೀತಿಯ ಆಹಾರ ಪದಾರ್ಥ ಗಳಿಗೆ ಸೆಡ್ಡು ಹೊಡೆಯಬಲ್ಲುದು. ಆದ್ದರಿಂದ ಇದು ಅನೀಮಿಯಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಬಹಳ ಸಹಾಯ ಮಾಡುತ್ತದೆ.

 

ಕೊಲೆಸ್ಟ್ರಾಲ್ ಅಂಶದ ನಿರ್ವಹಣೆ ಮತ್ತು ರಕ್ತದ ಒತ್ತಡದ ಸಮಸ್ಯೆಗೆ

 

ಪ್ರಾರಂಭದಲ್ಲಿ ಉಂಟಾಗುವ ರಕ್ತದ ಒತ್ತಡದ ಸಮಸ್ಯೆಯನ್ನು ನಿರ್ಲಕ್ಷಿದರೆ ಭವಿಷ್ಯದಲ್ಲಿ ಹೃದಯಕ್ಕೆ ತೊಂದರೆ ಆಗುವ ಎಲ್ಲಾ ಲಕ್ಷಣಗಳಿರುತ್ತವೆ. ದೇಹದಲ್ಲಿ ರಕ್ತದ ಒತ್ತಡ ನಿಯಂತ್ರಣದಲ್ಲಿ ಇಡಬೇಕಾದರೆ ಮೊದಲು ನಾವು ತೆಗೆದುಕೊಳ್ಳುವ ಆಹಾರದಲ್ಲಿರುವ ಕೊಲೆಸ್ಟರಾಲ್ ಮತ್ತು ಕೊಬ್ಬಿನ ಅಂಶದ ಕಡೆಗೆ ವಿಶೇಷವಾದ ಗಮನ ಹರಿಸಬೇಕು. ಬಾಳೆದಿಂಡಿನ ರಸದಲ್ಲಿ ಕಬ್ಬಿಣದ ಅಂಶ, ವಿಟಮಿನ್ ‘ ಬಿ ೬ ‘ ಮತ್ತು ಪೊಟ್ಯಾಶಿಯಂ ಅಂಶ ಇರುವುದರಿಂದ ದೇಹದಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ತಗ್ಗಿಸಿ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವವರಿಗೆ ರಕ್ತದ ಒತ್ತಡವನ್ನು ಕಡಿಮೆ ಮಾಡಿ ಸಹಾಯ ಮಾಡುತ್ತದೆ.

 

ಗ್ಯಾಸ್ಟಿಕ್ ಸಮಸ್ಯೆಗೆ ರಾಮಬಾಣ ಬಾಳೆದಿಂಡಿನ ರಸ

 

ನಿಮಗೆ ಆಗಾಗ ಅಸಿಡಿಟಿಯ ಸಮಸ್ಯೆಯಿಂದ ಬೇಸತ್ತು ಹೋಗಿದ್ದರೆ, ಜೊತೆಯಲ್ಲಿ ಯಾವಾಗ ಆಗಾಗ ಎದೆಯುರಿ ಮತ್ತು ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳುತ್ತಿದ್ದರೆ ಬಾಳೆ ಹಣ್ಣಿನ ಅಥವಾ ಬಾಳೆ ದಿಂಡಿನ ರಸ ಸೇವಿಸುವುದನ್ನು ರೂಡಿ ಮಾಡಿಕೊಂಡರೆ ಅದು ದೇಹದಲ್ಲಿ ಆಮ್ಲೀಯತೆ ಯ ಮಟ್ಟವನ್ನು ಸಮತೋಲನಕ್ಕೆ ತಂದು ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಕೊಡುತ್ತದೆ. ಅನಿಮಿಯಾದ ಸ್ನೇಹಿತರಿಗೆ ಅಂತೂ ಬಾಳೆಯ ದಿಂಡು ಮಾಡುತ್ತದೆ ಒಳ್ಳೆಯ ಪಾಠ. ಹೌದು, ಬಾಳೆಯ ದಿಂಡಿನ ರಸದಲ್ಲಿ ಕಬ್ಬಿಣದಂಶ ಮತ್ತು ವಿಟಮಿನ್ ‘ ಬಿ6 ‘ ಅಂಶ ಹೆಚ್ಚಿರುವುದರಿಂದ ಸಹಜವಾಗಿಯೇ ಇದರ ಸೇವನೆಯಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಾಗುವಂತೆ ಮಾಡುತ್ತದೆ. ಈ ಗುಣ ಲಕ್ಷಣದಿಂದಲೇ ಅನೀಮಿಯಾ ರೋಗಿಗಳು ಬಾಳೆ ದಿಂಡಿನ ರಸವನ್ನು ಕುಡಿಯುವುದನ್ನು ತಮ್ಮ ಜೀವನದ ಆಹಾರ ಪದ್ಧತಿಗಳಲ್ಲಿ ಒಂದರಂತೆ ಭಾವಿಸುತ್ತಾರೆ.

 

ಸಕ್ಕರೆ ಕಾಯಿಲೆಗೆ ರಾಮಬಾಣ ಬಾಳೆಹಣ್ಣಿನ ದಿಂಡಿನ ರಸ

ಸಕ್ಕರೆ ಖಾಯಿಲೆ ಮನುಷ್ಯನಿಗೆ ಎದುರಾಗುವುದಕ್ಕೆ ಕಾರಣ ದೇಹದಲ್ಲಿ ಇನ್ಸುಲಿನ್ ಮಟ್ಟ ಸಮತೋಲನತೆಯನ್ನು ಕಾಯ್ದುಕೊಳ್ಳದೆ ಇರುವುದು.ಇದರಿಂದ ಕೈ ಕಾಲುಗಳು ಮತ್ತು ಮುಖ ಊದಿಕೊಳ್ಳುವುದು, ಕಾಲುಗಳಲ್ಲಿ ಉರಿ, ಗಾಯ ಬೇಗನೆ ವಾಸಿಯಾಗದೆ ಇರುವುದು. ಇಂತಹ ಹಲವಾರು ಸಮಸ್ಯೆಗಳನ್ನು ಸಕ್ಕರೆ ಖಾಯಿಲೆಯ ರೋಗಿಗಳು ಅನುಭವಿಸಬೇಕಾಗುತ್ತದೆ. ಆದರೆ ಬಾಳೆದಿಂಡಿನ ರಸ ಇದಕ್ಕೆಲ್ಲಾ ಮುಕ್ತಿ ಕೊಟ್ಟು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದರಿಂದ ಸಹಜವಾಗಿಯೇ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಆದರೆ ಯಾವುದೇ ಕಾರಣಕ್ಕೂ ಬಾಳೆಯ ದಿಂಡಿನ ರಸವನ್ನು ಸೋಸದೆ ಕುಡಿಯಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಇದ್ದಕ್ಕಿದ್ದಂತೆ ಏರಿಕೆಯಾಗುವುದು ತಪ್ಪಿದಂತಾಗುತ್ತದೆ.

 

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version