ಬಕ್ರೀದ್ ಹಬ್ಬಕ್ಕೆ ಶುಭಾಶಯ ಕೋರಿದ ಮುಖಂಡರು.

ಬಕ್ರೀದ್ ಹಬ್ಬಕ್ಕೆ ಶುಭಾಶಯ ಕೋರಿದ ಮುಖಂಡರು.

 

ತುಮಕೂರು ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಜಿಲ್ಲಾ ಕಾಂಗ್ರೆಸ್ನ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಆದ ಅತಿಕ್ ಅಹಮದ್ ರವರು ನಾಡಿನ ಸಮಸ್ತ ಜನತೆಗೆ ಬಕ್ರೀದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

 

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರದ ಮಾರ್ಗಸೂಚಿಯಂತೆ ಸರಳ ರೀತಿಯಲ್ಲಿ ಹಬ್ಬವನ್ನು ಆಚರಿಸಲಾಗುತ್ತಿದೆ ಕಳೆದ ಎರಡು ವರ್ಷದಿಂದ ಕರೋನ ಸಾಂಕ್ರಾಮಿಕ ರೋಗವು ಪ್ರಪಂಚವನ್ನು ಆಕ್ರಮಿಸಿ ಎಲ್ಲರನ್ನು ಆತಂಕಕ್ಕೀಡುಮಾಡಿದೆ ಇನ್ನು ಕರೋಣ ಸಾಂಕ್ರಾಮಿಕ ರೋಗಕ್ಕೆ ಬಂಧು-ಬಾಂಧವರು ತುತ್ತಾಗಿದ್ದು ಹಲವರು ಜೀವವನ್ನು ಕಳೆದುಕೊಂಡಿದ್ದು ಎಲ್ಲರನ್ನೂ ನೋವುಂಟು ಮಾಡಿದೆ ಆದ್ದರಿಂದ ಈ ಬಾರಿ ಹಬ್ಬವನ್ನು ಸರಳ ರೀತಿಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಪ್ರಾರ್ಥನೆ ಸಲ್ಲಿಸಿ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದರು .

ಆದಷ್ಟು ಬೇಗ ಈ ರೋಗದಿಂದ ಮುಕ್ತಿ ಸಿಗಲಿ ಜನತೆಯ ಜೀವನ ಸುಧಾರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಇರುವುದಾಗಿ ತಿಳಿಸಿದ್ದಾರೆ.

 

ಬಕ್ರೀದ್ ಹಬ್ಬಕ್ಕೆ ಶುಭಾಶಯ ಕೋರಿದ ಮುಖಂಡ_ ಇಕ್ಬಾಲ್ ಅಹ್ಮದ್.

 

ಮಾಜಿ ವಾಖ್ ಬೋರ್ಡ್ ಅಧ್ಯಕ್ಷರು , ಸಮಾಜಸೇವಕರು ಹಾಗೂ ಕಾಂಗ್ರೆಸ್ ಮುಖಂಡರು ಆದ ಇಕ್ಬಾಲ್ ಅಮ್ಮದ್ ರವರು ಸಹ ನಾಡಿನ ಸಮಸ್ತ ಜನತೆಗೆ ಬಕ್ರೀದ್ ಹಬ್ಬದ ಶುಭಾಶಯವನ್ನು ತಿಳಿಸಿದ್ದು.

 

ಈ ಬಾರಿಯೂ ಸಹ ಕರೋನ ಆತಂಕದ ನಡುವೆ ಹಬ್ಬವನ್ನು ಸರಳ ರೀತಿಯಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಿ ಹಬ್ಬವನ್ನು ಆಚರಿಸಲಾಗಿದೆ . ಸರ್ಕಾರ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ಬಡಾವಣೆಯ ಮಸೀದಿಗಳಲ್ಲಿ ಹಾಗೂ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ಎಲ್ಲರಲ್ಲೂ ಶಾಂತಿ ಸುಖ ನೆಮ್ಮದಿ ಸಿಗಲಿ ಉತ್ತಮ ಮಳೆ ಬೆಳೆ ಆಗಲಿ ಕರೋನ ಸಾಂಕ್ರಾಮಿಕ ರೋಗದಿಂದ ಮುಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version