ತುಮಕೂರು ಗ್ರಾಮಾಂತರ ಪಂಚರತ್ನ ಯಾತ್ರೆಗೆ ಸಕಲ ಸಿದ್ಧತೆ ನಡೆಯುತ್ತಿದೆ _ಜೆಡಿಎಸ್ ಮುಖಂಡ ಹರೀಶ್

ತುಮಕೂರು ಗ್ರಾಮಾಂತರ ಪಂಚರತ್ನ ಯಾತ್ರೆಗೆ ಸಕಲ ಸಿದ್ಧತೆ ನಡೆಯುತ್ತಿದೆ _ಜೆಡಿಎಸ್ ಮುಖಂಡ ಹರೀಶ್

 

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಯಲ್ಲಾಪುರ ಗ್ರಾಮದಲ್ಲಿ ಪಂಚರತ್ನ ರಥ ಯಾತ್ರೆಯ ಸ್ವಾಗತ ಹಾಗೂ ಬಹಿರಂಗ ಸಭೆಗೆ ಶಾಸಕರಾದ ಡಿ.ಸಿ ಗೌರಿಶಂಕರ್ ನೇತೃತ್ವದಲ್ಲಿ ಅದ್ದೂರಿ ಸಿದ್ದತೆ ಕೈಗೊಳ್ಳುತ್ತಿದ್ದು ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದು ಬೆಳಗುಂಬ ಜಿಲ್ಲಾ ಪಂಚಾಯತ್ ಉಸ್ತುವಾರಿ ಎನ್ ಆರ್ ಹರೀಶ್ ತಿಳಿಸಿದ್ದಾರೆ.

 

ಯಲ್ಲಾಪುರ ಗ್ರಾಮದಲ್ಲಿ ಸ್ಥಳೀಯ ಜೆಡಿಎಸ್ ಮುಖಂಡರ ಜೊತೆ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳನ್ನ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

 

 

ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಗ್ರಾಮದಿಂದ ಪಂಚರತ್ನ ಯಾತ್ರೆ ಆಋಂಭವಾಗಲಿದ್ದು,ರಥ ಯತ್ರೆಯನ್ನು ವಿಭಿನ್ನವಾಗಿ ,ವಿಶಿಷ್ಟವಾಗಿ ಸ್ವಾಗತಿಸಲು ಸಕಲ ಸಿದ್ದತೆ ಕೈಗೊಳ್ಳಲಾಗಿದೆ.ರಥಯಾತ್ರೆ  ಸಾಗುವ ಮಾರ್ಗದುದ್ದಕ್ಕೂ ಪಂಚರತ್ನ ರಥ ಯಾತ್ರೆ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ವಿಶಿಷ್ಟವಾಗಿ ಸ್ವಾಗತಿಸಲು ಜೆಡಿಎಸ್ ಯುವ ಪಡೆ ಸಜ್ಜಾಗಿದೆ ಎಂದರು.

 

 

 

ಹೆಬ್ಬೂರಿನಿಂದ 5000 ಜೆಡಿಎಸ್ ಕಾರ್ಯಕರ್ತರ ಬೈಕ್ ರ್ಯಾಲಿ ಆಯೋಜಿಸಲಾಗಿದೆ,ರಥ ಯಾತ್ರೆ ಸಾಗುವ ಮಾರ್ಗದಲ್ಲಿ‌ ಬೈಕ್ ರ್ಯಾಲಿ ಸಾಗಲಿದೆ,ಯಲ್ಲಾಪುರ ಗ್ರಾಮದಲ್ಲಿ ಬೃಹತ್ ಸಭೆ ಹಾಗೂ ಲೇಸರ್ ಶೋ ಮತ್ತು ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಿದ್ದು ಜೆಡಿಎಸ್ ಕಾರ್ಯಕರ್ತರು ಅಸಂಖ್ಯಾತ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

 

 

 

 

ಈ ವೇಳೆ ಜೆಡಿಎಸ್ ಎಸ್ ಸಿ ಘಟಕದ ಅಧ್ಯಕ್ಷ ಬೆಳಗುಂಬ ವೆಂಕಟೇಶ್,ಯಲ್ಲಾಪುರ ಗ್ರಾಮದ ಜೆಡಿಎಸ್ ಹಿರಿಯ ಮುಖಂಡರಾದ ಸಿದ್ದಲಿಂಗಪ್ಪ, ಮಾಜಿ ಸಿಂಡಿಕೇಟ್ ಸದಸ್ಯ ಮಂಜುನಾಥ್,ಸ್ತಳೀಯ ಜೆಡಿಎಸ್ ಮುಖಂಡರಾದ ಸತೀಶ,ಜಯಣ್ಣ,ವೆಂಕಟೇಶ್ ,ಕೊಂತಿಹಳ್ಳಿ ರವೀಶ್ ಸೇರಿದಂತೆ ಹಲವರು ಉಪಸ್ತಿತರಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version