2 ಕಾರು ಬೈಕ್ ನಡುವೆ ಅಪಘಾತ, ದಂಪತಿಗಳ ಸಾವು ಓರ್ವನ ಸ್ಥಿತಿ ಗಂಭೀರ.

2 ಕಾರು ಬೈಕ್ ನಡುವೆ ಅಪಘಾತ, ದಂಪತಿಗಳ ಸಾವು ಓರ್ವನ ಸ್ಥಿತಿ ಗಂಭೀರ.

 

 

ತುಮಕೂರು_ಎರಡು ಕಾರು ಹಾಗೂ ಬೈಕ್ ನಡುವೆ ಶನಿವಾರ ಸಂಜೆ 5ಗಂಟೆ ವೇಳೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠದಿಂದ ಹಾಗೂ ಉರ್ಡಿಗೆರೆ ರಸ್ತೆಯಲ್ಲಿ ಬರುವ ಸಿದ್ದಗಂಗಾ ಮಠದ ಕ್ರಾಸ್ ಬಳಿ ಅಪಘಾತ ನಡೆದ ಸ್ಥಳದಲ್ಲಿ ದಂಪತಿಗಳು ಸ್ಥಳದಲ್ಲೇ ದುರ್ಮರಣ ಹೊಂದಿದ್ದು.

 

ಮತ್ತೊಂದು ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ಬಜರಂಗದಳದ ತುಮಕೂರು ಜಿಲ್ಲಾ ಸಂಚಾಲಕ ಮಂಜು ಭಾರ್ಗವನಿಗೆ ತಲೆಗೆ ತೀವ್ರವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಗೆ ಕಳುಹಿಸಲಾಗಿದೆ.ಮತ್ತೊಂದು ಕಾರು ಮಾರುತಿ ಒಮಿನಿ ಯಲ್ಲಿ ಚಲಾವಣೆ ಮಾಡುತ್ತಿದ್ದ ಚಾಲಕ ನ ಬಗ್ಗೆ ಮಾಹಿತಿ ದೊರೆತಿಲ್ಲ.

 

 

ಇನ್ನು ಮೃತಪಟ್ಟ ದಂಪತಿಗಳನ್ನು ತುಮಕೂರಿನ ಕುವೆಂಪುನಗರದ ನಿವಾಸಿಗಳಾದ ನರಸಿಂಹರಾಜು ಹಾಗೂ ನಾಗರತ್ನಮ್ಮ ಎಂದು ಗುರುತಿಸಲಾಗಿದ್ದು ಮೂಲತಹ ಉರ್ಡಿಗೆರೆ ಬಳಿಯ ಇರಕಸಂದ್ರ ಕಾಲೋನಿಯ ನೀಲಗೊಂಡನಹಳ್ಳಿ ವಾಸಿಗಳು ಎಂದು ತಿಳಿದುಬಂದಿದ್ದು. ಎರಡು ಕಾರು ಹಾಗೂ ಬೈಕ್ ನಡುವೆ ಸಿಲುಕಿದ ದಂಪತಿಗಳು ಸ್ಥಳದಲ್ಲೇ ಅಸುನೀಗಿದ್ದಾರೆ.

 

 

ಇನ್ನು ಮೃತದೇಹಗಳನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 

ವರದಿ _ಮಾರುತಿ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version