ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟದ ಸಚಿವರ ಪ್ರಮಾಣ ವಚನ ಸ್ವೀಕಾರ.

ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟದ ಸಚಿವರ ಪ್ರಮಾಣ ವಚನ ಸ್ವೀಕಾರ.

ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರ ದ ನೂತನ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ರವರ ಸಚಿವ ಸಂಪುಟಕ್ಕೆ ಇಂದು 29 ಸಚಿವರು ಪ್ರಮಾಣವಚನ ಸ್ವೀಕರಿಸುವ ಮೂಲಕ ಬೊಮ್ಮಾಯಿ ಬ್ರಿಗೇಡ್ ಗೆ ಸೇರ್ಪಡೆಯಾಗಿದ್ದಾರೆ.

 

ಇಂದು ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲರಾದ ಗೆಹಲೋಟ್ ರವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.

 

ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಸಚಿವರ ವಿವರ ಇಂತಿದೆ.

ಆರ್.ಅಶೋಕ್- ಪದ್ಮನಾಭ ನಗರ

ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ

ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ

ಬಿಸಿ ಪಾಟೀಲ್ – ಹಿರೇಕೇರೂರು

ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು

ಉಮೇಶ್ ಕತ್ತಿ- ಹುಕ್ಕೇರಿ

ಎಸ್.ಟಿ.ಸೋಮಶೇಖರ್- ಯಶವಂತಪುರ

ಭೈರತಿ ಬಸವರಾಜ- ಕೆ ಆರ್ ಪುರಂ

ಮುರುಗೇಶ್ ನಿರಾಣಿ- ಬಿಳಿಗಿ

ಡಾ.ಕೆ.ಸುಧಾಕರ್- ಚಿಕ್ಕಬಳ್ಳಾಪುರ

ಶಿವರಾಂ ಹೆಬ್ಬಾರ್- ಯಲ್ಲಾಪುರ

ಶಶಿಕಲಾ ಜೊಲ್ಲೆ- ನಿಪ್ಪಾಣಿ

ಕೆಸಿ ನಾರಾಯಣ್ ಗೌಡ – ಕೆಆರ್ ಪೇಟೆ

ಸುನೀಲ್ ಕುಮಾರ್ – ಕಾರ್ಕಳ

ಅರಗ ಜ್ಞಾನೇಂದ್ರ- ತೀರ್ಥ ಹಳ್ಳಿ

ಗೋವಿಂದ ಕಾರಜೋಳ-ಮುಧೋಳ

ಮುನಿರತ್ನ- ಆರ್ ಆರ್ ನಗರ

ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ

ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್

ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ

ಹಾಲಪ್ಪ ಆಚಾರ್ – ಯಲ್ಬುರ್ಗ

ಶಂಕರ್ ಪಾಟೀಲ್ ಮುನೇನಕೊಪ್ಪ- ನವಲುಗುಂದ

ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ

ಆನಂದ್ ಸಿಂಗ್ – ಹೊಸಪೇಟೆ

ಸಿ ಸಿ ಪಾಟೀಲ್ – ನರಗುಂದ

ಬಿಸಿ ನಾಗೇಶ್ – ತಿಪಟೂರು

ಪ್ರಭು ಚೌವ್ಹಾಣ್ – ಔರಾದ್

ವಿ ಸೋಮಣ್ಣ – ಗೋವಿಂದ್ ರಾಜನಗರ

ಎಸ್ ಅಂಗಾರ- ಸುಳ್ಯ

 

ಇನ್ನು ಕೊನೆಗಳಿಗೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಪ್ರಯತ್ನ ಕೊನೆಯ ಹಂತದಲ್ಲಿ ಕೈತಪ್ಪಿದ್ದು ಮುಂದಿನ ದಿನದಲ್ಲಿ ಯಾವ ರೀತಿಯ ಬದಲಾವಣೆ ಆಗುವುದು ಎಂದು ಕಾದು ನೋಡಬೇಕಾಗಿದೆ.

 

ಇನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಪಾಲರಾದ ಗೆಹ್ಲೋಟ್ ರವರು ನೂತನ ಸಚಿವರಿಗೆ ಶುಭಕೋರಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version