ನೂತನ ಜಿಲ್ಲೆಯಾಗಿ ವಿಜಯನಗರ: ರಾಜ್ಯ ಪತ್ರ ಹೊರಡಿಸಿದ ಸರ್ಕಾರ

ನೂತನ ಜಿಲ್ಲೆಯಾಗಿ ವಿಜಯನಗರ: ರಾಜ್ಯ ಪತ್ರ ಹೊರಡಿಸಿದ ಸರ್ಕಾರ

 

 

ಬೆಂಗಳೂರು: ರಾಜ್ಯದ 31 ನೇ ಜಿಲ್ಲೆಯಾಗಿ ವಿಜಯನಗರವನ್ನು ಅಧಿಕೃತವಾಗಿ ಘೋಷಣೆ ಮಾಡಿ ರಾಜ್ಯ ಸರ್ಕಾರ ರಾಜ್ಯ ಪತ್ರವನ್ನು ಹೊರಡಿಸಿದೆ.

 

ನೂತನ ವಿಜಯನಗರ ಜಿಲ್ಲೆಗೆ 6 ತಾಲೂಕುಗಳನ್ನು ಸೇರ್ಪಡೆ ಮಾಡಲಾಗಿದ್ದು, ಕೇಂದ್ರ ಸ್ಥಾನವಾಗಿ ಹೊಸಪೇಟೆಗೆ ಸ್ಥಾನ ನೀಡಲಾಗಿದೆ. ಹೊಸಪೇಟೆ, ಕೂಡ್ಲಿಗಿ, ಹಗರಿ ಬೊಮ್ಮನಹಳ್ಳಿ, ಕೊಟ್ಟೂರು, ಹೂವಿನ ಹಡಗಲಿ, ಹರಪನ ಹಳ್ಳಿ ತಾಲ್ಲೂಕುಗಳು ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡಲಾಗಿದೆ. ವಿಜಯನಗರವೂ ಸೇರಿದಂತೆ ಈ ತಾಲ್ಲೂಕುಗಳು ಈ ಹಿಂದೆ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದ್ದವು.

 

ಕುರಗೋಡು, ಬಳ್ಳಾರಿ, ಸಿರಗೊಪ್ಪ,ಕಂಪ್ಲಿ, ಸಂಡೂರು ತಾಲ್ಲೂಕುಗಳು ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಉಳಿದುಕೊಂಡಿವೆ. ಸದ್ಯ ನೂತನ ಜಿಲ್ಲೆಯಾಗಿ ಅಧಿಕೃತಗೊಂಡಿರುವ ವಿಜಯನಗರ 6 ತಾಲ್ಲೂಕುಗಳನ್ನು ಒಳಗೊಂಡು ಬಳ್ಳಾರಿಗಿಂತ ಗಾತ್ರದಲ್ಲಿ ಹಿರಿದಾಗಿದೆ. 2020 ರ ನವೆಂಬರ್‌ ತಿಂಗಳಾಂತ್ಯದಲ್ಲಿ ವಿಜಯನಗರವನ್ನು ನೂತನ ಜಿಲ್ಲೆಯಾಗಿ ಘೋಷಿಸುವ ಸಲುವಾಗಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಇದೀಗ ಈ ತೀರ್ಮಾನಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version