ತೆಂಗಿನ ಕಾಯಿ ಕೀಳುವಾಗ ವಿದ್ಯುತ್ ತಗುಲಿ ಕೂಲಿ ಕಾರ್ಮಿಕ ಸಾವು.

ತೆಂಗಿನ ಕಾಯಿ ಕೀಳುವಾಗ ವಿದ್ಯುತ್ ತಗುಲಿ ಕೂಲಿ ಕಾರ್ಮಿಕ ಸಾವು.

 

 

ತುಮಕೂರು – ತೆಂಗಿನಕಾಯಿ ಕೀಳುವಾಗ ವಿದ್ಯುತ್ ತಗುಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ವರದಿಯಾಗಿದೆ.

 

 

 

ತುಮಕೂರು ತಾಲೂಕಿನ ಹಾಲನೂರು ಬಳಿಯ ಅದಲಾಪುರ ಗ್ರಾಮದಲ್ಲಿ ಮಂಗಳವಾರ ಮಧ್ಯಾನ ಘಟನೆ ನಡೆದಿದ್ದು.

 

 

 

 

 

 

ತೆಂಗಿನ ಕಾಯಿ ಕೀಳುವ ರೋಟಿಗೆ ವಿದ್ಯುತ್ ಪ್ರವಹಿಸಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

 

 

 

 

 

ಮೃತಪಟ್ಟ ಯುವಕನನ್ನ ಗುಬ್ಬಿ ತಾಲೂಕಿನ ಅಡಗೂರು ಗ್ರಾಮದ ಮದನ್ (24) ಎಂದು ತಿಳಿದುಬಂದಿದೆ.

 

 

 

ಮೃತಪಟ್ಟ ಯುವಕ ಮದನ್ ಅದಲಾಪುರ ಗ್ರಾಮದ ಶೋಭಾ ಎಂಬುವವರ ತೋಟಕ್ಕೆ ತೆಂಗಿನಕಾಯಿ ಕೀಳಲು ಕೂಲಿ ಕೆಲಸಕ್ಕೆ ಆಗಮಿಸಿದ್ದ ಎನ್ನಲಾಗಿದೆ.

 

 

 

ಮೃತಪಟ್ಟ ಯುವಕನ ಮೃತ ದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version