ಜನಪ್ರಿಯ ನಾಯಕ ಡಿಸಿ ಗೌರಿಶಂಕರ್ ಅವರ ಮನೆಗೆ ಹರಿದು ಬಂದ ಜನಸಾಗರ..

ಜನಪ್ರಿಯ ನಾಯಕ ಡಿಸಿ ಗೌರಿಶಂಕರ್ ಅವರ ಮನೆಗೆ ಹರಿದು ಬಂದ ಜನಸಾಗರ..

 

ತುಮಕೂರು ಗ್ರಾಮಾಂತರ -ಶಾಸಕರಾಗಿ ಆಯ್ಕೆ ಆದಾಗಿನಿಂದಲೂ ವಾರಕ್ಕೊಮ್ಮೆ ಜನತಾ ದರ್ಶನ ನಡೆಸಿ, ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಸಾವಿರಾರು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸೂಕ್ತ ಪರಿಹಾರ ಒದಗಿಸುವುದರ ಜೊತೆಗೆ ವೈಯಕ್ತಿಕವಾಗಿ ಧನ ಸಹಾಯ ಮಾಡಿ, ಹೆದರಬೇಡಿ ನಿಮ್ಮ ಜೊತೆ ನಾನಿದ್ದೇನೆ ಎಂದು ಧೈರ್ಯ ತುಂಬಿ, ಊಟ ಮಾಡಿಸಿ ಕಳುಹಿಸುವ ಮೂಲಕ ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ…

 

 

 

ತುಮಕೂರು ಗ್ರಾಮಾಂತರದ ಬಡವರ ಬಂಧು, ಯುವಕರ ಆಶಾಕಿರಣ, ಅಭಿವೃದ್ಧಿಯ ಹರಿಕಾರ, ಕೊಡುಗೈ ದಾನಿ, ಜನಪ್ರಿಯ ಶಾಸಕರಾದ ಡಿಸಿ ಗೌರಿಶಂಕರ್ ಅವರ ಬಳ್ಳಗೆರೆಯ ನಿವಾಸದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾವಿರಾರು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸೂಕ್ತ ಪರಿಹಾರ ಒದಗಿಸಿ,

 

 

 

ಆರೋಗ್ಯ, ಮದುವೆ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 500ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮನೆ ಕಟ್ಟಿಕೊಳ್ಳಲು ಶೀಟ್ ಸಿಮೆಂಟ್ ಸೇರಿದಂತೆ ಇನ್ನಿತರ ಸಮಸ್ಯೆ ಉಳ್ಳವರಿಗೆ ವೈಯಕ್ತಿಕವಾಗಿ ಸುಮಾರು 10,00,000 (ಹತ್ತು ಲಕ್ಷ) ರೂಗಳ ಧನಸಹಾಯ ಮಾಡಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!