ಘಟಿಕೋತ್ಸವದಲ್ಲಿ ಪದವಿ ಪಡೆದ ನಂತರ ಹಾವು ಕಡಿದು ಎಂಬಿಬಿಎಸ್ ವಿದ್ಯಾರ್ಥಿ ಸಾವು .ತುಮಕೂರಿನಲ್ಲಿ ಘಟನೆ

ಘಟಿಕೋತ್ಸವದಲ್ಲಿ ಪದವಿ ಪಡೆದ ನಂತರ ಹಾವು ಕಡಿದು ಎಂಬಿಬಿಎಸ್ ವಿದ್ಯಾರ್ಥಿ ಸಾವು .ತುಮಕೂರಿನಲ್ಲಿ ಘಟನೆ

 

 

 

ತುಮಕೂರು _ ಹಾವು ಕಡಿದು ಎಂಬಿಬಿಎಸ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

 

 

 

 

 

ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ MBBS ಪದವಿ ಪೂರೈಸಿ ನೆನ್ನೆ ನಡೆದ 14ನೇ ಗಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದ ವಿದ್ಯಾರ್ಥಿ ಕೇರಳ ಮೊಲದ ಅದಿತ್ ಬಾಲಕೃಷ್ಣನ್ ಎಂಬುವವರೇ ಮೃತಪಟ್ಟ ವಿದ್ಯಾರ್ಥಿಯಾಗಿದ್ದು.

 

 

 

 

ನೆನ್ನೆ ನಡೆದ ಗಟಿಕೋತ್ಸವ ಮುಗಿದ ನಂತರ ಹೆಗ್ಗೆರೆ ಬಳಿಯ ಫ್ಲಾಟ್ ಬಳಿ   ಕಾರನ್ನು ನಿಲ್ಲಿಸುವ  ವೇಳೆ ಹಾವು ಕಚ್ಚಿದ್ದು ಅದನ್ನ ಗಮನಿಸದೆ ಮನೆಗೆ ತೆರಳಿದ ವಿದ್ಯಾರ್ಥಿ ಏಕಾಏಕಿ ಫ್ಲಾಟ್ ನಲ್ಲಿ ಕುಸಿದು  ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

 

 

ಇನ್ನು ಮೃತಪಟ್ಟ ವಿದ್ಯಾರ್ಥಿಯ ಶವವು ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಇರಿಸಲಾಗಿದ್ದು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!