ಮುಂದಿನ ದಿನದಲ್ಲಿ ವೀರಶೈವ ಲಿಂಗಾಯಿತರ ಒಗ್ಗಟ್ಟು ಪ್ರದರ್ಶನ ಮತ್ತಷ್ಟು ಜೋರಾಗಲಿದೆ- ಮನೋಹರ್ ಅಬ್ಬಿಗೆರೆ.

ಮುಂದಿನ ದಿನದಲ್ಲಿ ವೀರಶೈವ ಲಿಂಗಾಯಿತರ ಒಗ್ಗಟ್ಟು ಪ್ರದರ್ಶನ ಮತ್ತಷ್ಟು ಜೋರಾಗಲಿದೆ- ಮನೋಹರ್ ಅಬ್ಬಿಗೆರೆ.

 

ತುಮಕೂರು_ಮುಂದಿನ ದಿನದಲ್ಲಿ ವೀರಶೈವ ಲಿಂಗಾಯಿತರ ಪ್ರದರ್ಶನ ಮತ್ತಷ್ಟು ಜೋರಾಗಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷರಾದ ಮನೋಹರ್ ಅಬ್ಬಿಗೆರೆ ತಿಳಿಸಿದ್ದಾರೆ.

 

 

 

ಸಿದ್ದಗಂಗಾ ಮಠದ ವಸ್ತು ಪ್ರದರ್ಶನದ ಆವರಣದಲ್ಲಿ ನಡೆಯುತ್ತಿರುವ ಬೆಂಗಳೂರು ವಿಭಾಗೀಯ ಮಟ್ಟದ ಮಹಿಳಾ ಮತ್ತು ಯುವ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು ತುಮಕೂರಿನಲ್ಲಿ ನಡೆದ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿದ್ದು ಆ ಮೂಲಕ ಸಾಮಾಜಿಕ ಕನಸಿನೊಂದಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಬಿತ್ತಿದ ಬಸವಣ್ಣನವರ ಹಾದಿಯಲ್ಲಿ ಸಮುದಾಯ ನಡೆಯಲಿದೆ ಎಂದಿರುವ ಅವರು ಮುಂದಿನ ದಿನದಲ್ಲಿ ಯುವ ಸಮುದಾಯವನ್ನು ಮತ್ತಷ್ಟು ಜಾಗೃತಗೊಳಿಸಲು ಬೃಹತ್ ಸಮಾವೇಶವನ್ನು ಆಯೋಜಿಸುವುದಾಗಿ ತಿಳಿಸಿದರು.

 

 

 

ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮುದಾಯಕ್ಕೆ ಮುಖ್ಯವಾಗಿ ಯುವ ಪೀಳಿಗೆ ಹಾಗೂ ಮಹಿಳೆಯರಿಗೆ ಒಂದು ಒಳ್ಳೆಯ ಸಂದೇಶ ರವಾನೆಯಾಗಿದೆ ಈ ಮೂಲಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವನ್ನು ವೀರಶೈವ ಲಿಂಗಾಯಿತ ಎಂದು ಅಜೆಂಡಾದಲ್ಲಿ ತೀರ್ಮಾನಿಸಲಾಗಿದೆ ಎಂದರು.

 

 

 

 

ಇನ್ನು ನಮ್ಮ ಸಮುದಾಯದಲ್ಲಿ ಇರುವ 108 ಉಪಪಂಗಡಗಳನ್ನು ಒಟ್ಟುಗೂಡಿಸಿ ಎಲ್ಲರೂ ಒಂದೇ ಎನ್ನುವ ಸಂದೇಶ ಸಾರುವ ಮೂಲಕ ನಮ್ಮ ನಮ್ಮ ಶಕ್ತಿ ಪ್ರದರ್ಶನ ನಡೆಯುತ್ತದೆ ಎಂದು ತಿಳಿಸಿದರು.

 

 

 

ವೀರಶೈವ ಲಿಂಗಾಯಿತ ಧರ್ಮ ಹೋರಾಟ ಮುಂದುವರಿಕೆ.

ಇನ್ನು ವೀರಶೈವ ಲಿಂಗಾಯಿತ ಧರ್ಮಕ್ಕೆ ಸಂಬಂಧಿಸಿದಂತೆ ಅದರ ಘೋಷಣೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಆ ಮೂಲಕ ತಮ್ಮ ಹಕ್ಕನ್ನು ಕೇಳುವ ಕೆಲಸವನ್ನು ಮುಂದುವರಿಸುವುದಾಗಿ ತಿಳಿಸಿದರು.

 

 

 

ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿನಟರಾಜ್ ಸಾಗರನಹಳ್ಳಿ,ಮಹಿಳಾ ಘಟಕಪ್ರಧಾನ ಕಾರ್ಯದರ್ಶಿ ಮುಕ್ತಾಂಬ ಬಿ , ಯುವ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್ ಕುಮಾರ್ ಪಾಟೀಲ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!