ತುಮಕೂರಿನಲ್ಲಿ  ಸೇತುವೆಗೆ ಬಸ್ ಡಿಕ್ಕಿ-ತಪ್ಪಿದ ಬಾರಿ ಅನಾಹುತ 

ತುಮಕೂರಿನಲ್ಲಿ  ಸೇತುವೆಗೆ ಬಸ್ ಡಿಕ್ಕಿ-ತಪ್ಪಿದ ಬಾರಿ ಅನಾಹುತ 

ತುಮಕೂರು- ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಸೇತುವೆ ಡಿಕ್ಕಿ ಹೊಡೆದು ಸಂಭಿಸಬಹುದಾದ ಭಾರಿ ಅನಾಹುತವೊಂದು ತಪ್ಪಿದೆ. ಗುಬ್ಬಿ ತಾಲೂಕಿನ ಅರೇನಹಳ್ಳಿ ಗೇಟ್ ಬಳಿ ಈ ದುರಂತ ತಪ್ಪಿದೆ. ಬೆಂಗಳೂರು-ಹೊನ್ನಾವರ ಚತುಷ್ಪಥ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಅರೇನಹಳ್ಳಿ ಗೇಟ್ ಬಳಿಯ ಸೇತುವೆಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ. ಆದರೆ ಸೇತುವೆ ಕೆಳಕ್ಕೆ ಅದೃಷ್ಟವಶಾತ್ ಬಸ್ ಉರುಳಿಲ್ಲ. ಪ್ರಪಾತಕ್ಕೆ ಬಸ್ ಉರುಳಿದರೆ ಬಸ್ಸಿನಲ್ಲಿ ಇದ್ದು ೧೭ ಪ್ರಯಾಣಿಕರ ಪ್ರಾಣಕ್ಕೆ‌ಸಂಚಕಾರ ಬರುತಿತ್ತು.

 

 

ಬೆಂಗಳೂರಿನಿಂದ ಕಡೂರಿಗೆ ತೆರಳುತಿದ್ದ ಸರ್ಕಾರಿ ಬಸ್ ಇದಾಗಿದ್ದು, ಅಪಘಾತ ಸಂಭಿಸಿದ ಹಿನ್ನಲೆ ಪ್ರಯಾಣಿಕರನ್ನು ಬೇರೆ ಬಸ್ಸಿನಲ್ಲಿ ಕಳುಹಿಸಲಾಯಿತು. ಸ್ಥಳಕ್ಕೆ ಗುಬ್ಬಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!