ಗುಬ್ಬಿ ತಾಲೂಕು ಸಿಎಸ್ ಪುರದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಆಚರಣೆ

 

ಗುಬ್ಬಿ ತಾಲೂಕು ಸಿಎಸ್ ಪುರದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಆಚರಣೆ

 

 

ಗುಬ್ಬಿ ತಾಲೂಕಿನ ಸಿಎಸ್ ಪುರ ಹೋಬಳಿಯ ಮಾವಿನಹಳ್ಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತೋತ್ಸವವನ್ನ ಅದ್ದೂರಿಯಾಗಿ ಆಚರಿಸಲಾಯಿತು. ಕೆಂಪೇಗೌಡ ಸಮಿತಿ ವತಿಯಿಂದ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಜೆಡಿಎಸ್ ಯುವ ಮುಖಂಡ ಜಗದೀಶ್ ಎಂ.ಎಲ್ ಕಾರ್ಯಕ್ರಮದ ನೇತೃತ್ವ ವಹಿಸಿದ್ರು. ಮಾವಿನಹಳ್ಳಿಯಿಂದ ಹೆಬ್ಬುರಿನವರೆಗೆ ಬೈಕ್ ರ್ಯಾಲಿ ನಡೆಸಿ ಹೆಬ್ಬುರಿನಲ್ಲಿ ನೂತನವಾಗಿ ಪ್ರತಿಷ್ಟಾಪಿಸಿರುವ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

 

ನಂತರ ಬೆಳ್ಳಿರಥದ ಮೂಲಕ ಕೆಂಪೇಗೌಡ ಪ್ರತಿಮೆಯನ್ನ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

 

 

ಕಾರ್ಯಕ್ರಮದಲ್ಲಿ ಮಾವಿನಹಳ್ಳಿ ಗ್ರಾ.ಪಂ ಅಧ್ಯಕ್ಷ ಜೆ.ವಿ.ಲೋಕೇಶ್, ಗ್ರಾ.ಪಂ ಸದಸ್ಯ ರಾಮು, ಪ್ರಕಾಶ್ ಚೆಂದಾವಿ, ಹೊನ್ನೇಗೌಡ, ಸತೀಶ್ ಮಾವಿನಹಳ್ಳಿ ಹಾಗೂ ಕೆಂಪೇಗೌಡ ಸಮಿತಿಯ ಸದಸ್ಯರು ಮತ್ತು ಗ್ರಾಮದ ಯುವಕರು ಉತ್ಸಾಹದಿಂದ ಭಾಗವಹಿಸಿದ್ರು.

Leave a Reply

Your email address will not be published. Required fields are marked *

You cannot copy content of this page

error: Content is protected !!