ಯುವಕನ ಅಂಗಾಗ ಧಾನ: ಜೀರೋ ಟ್ರಾಫೀಕ್ ನಲ್ಲಿ ಕಲಬುರಗಿ- ಹೈದ್ರಾಬಾದ ರವಾನೆ

ಕಲಬುರಗಿ..

ಯುವಕನ ಅಂಗಾಗ ಧಾನ: ಜೀರೋ ಟ್ರಾಫೀಕ್ ನಲ್ಲಿ ಕಲಬುರಗಿ- ಹೈದ್ರಾಬಾದ ರವಾನೆ

 

ಆಯ ತಪ್ಪಿ ಮನೆ ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದ ಹಿನ್ನಲೆ ಆತನ ಅಂಗಾಗವನ್ನು ಕುಟುಂಬಸ್ಥರು ಧಾನ ಮಾಡಿದ್ದಾರೆ‌. ಇಂದು ಕಲಬುರಗಿಯಿಂದ ಹೈದರಾಬಾದ್‌ಗೆ ಜೀರೋ ಟ್ರಾಫಿಕ್ ನಲ್ಲಿ ಯುವಕನ ಅಂಗಾಗ ರವಾನಿಸಲಾಯಿತು. ಆಳಂದ ತಾಲೂಕಿನ ಲಾಡಮುಗಳಿ ಗ್ರಾಮದ 19 ವರ್ಷದ ಮಹೇಶ ಎಂಬ ಯುವಕ ಮನೆಯ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಕಳೆದ 7 ದಿನಗಳಿಂದ ಚಿಕಿತ್ಸೆ ನಡೆಯುತ್ತಿದ್ರೂ ಸುಧಾರಿಸಿಕೊಂಡಿರಲಿಲ್ಲ. ಯುವಕನ ಬ್ರೇನ್ ಡೆಥ್ ಆದ ಹಿನ್ನಲೆ ಪಾಲಕರು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಯುವಕನ ಲಿವರ್ ಝಿರೋ ಟ್ರಾಫಿಕನಲ್ಲಿ ಹೈದ್ರಾಬಾದಗೆ ರವಾನಿದಲಾಗಿದೆ. ಹೈದ್ರಾಬಾದನಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮೂಲಕ ಬೆಂಗಳೂರಿನ ಜೆಪಿ ನಗರದ ಆಸ್ಟರ್ ಆರ್.ವಿ ಆಸ್ಪತ್ರೆಗೆ ಲಿವರ್ ರವಾನೆ ಮಾಡಲಾಗುತ್ತಿದೆ. ಕಲಬುರಗಿಯಿಂದ ಎಸ್ಕಾರ್ಟ ನೊಂದಿಗೆ ಝೀರೋ ಟ್ರಾಫಿಕ್ ಮೂಲಕ ಅಂಗಾಗ ರವಾನೆ ಮಾಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!