ಜಿ.ಎಸ್.ಬಸವರಾಜುಗೆ ಏಕೆ ಮಾಧುಸ್ವಾಮಿ ಮೇಲೆ ಕೋಪ?

ಜಿ.ಎಸ್.ಬಸವರಾಜುಗೆ ಏಕೆ ಮಾಧುಸ್ವಾಮಿ ಮೇಲೆ ಕೋಪ?

 

 

ತುಮಕೂರು: ದಕ್ಷಿಣ ಕೋರಿಯಾದ ಝಿಂಗ್ ಪಿನ್ ಇದ್ದಾನಲ್ಲ. ಕೆಟ್ಟ …… ಮಗ. ಅದೇ ತರಹ ನಮ್ಮ ಜಿಲ್ಲೆಯಲ್ಲೂ ಈವಾಗ ಮಂತ್ರಿಯಾಗಿದ್ದಾನೆ ಅಲ್ವಾ ಅವನು ಅದೇ ತರಹ ನಡೆದುಕೊಳ್ಳುತ್ತಿದ್ದಾನೆ, ಇವನು ನಮ್ಮ ಜಿಲ್ಲೆಯನ್ನೇ ಹಾಳು ಮಾಡಿಬಿಟ್ಟಿದ್ದಾನೆ ಎಂದು ಸಚಿವ ಮಾಧುಸ್ವಾಮಿ ವಿರುದ್ಧ ಸಂಸದ ಜಿ.ಎಸ್ ಬಸವರಾಜ್ ತಮ್ಮ ಒಳ ಮನಸ್ಸಿನ ವೇದನೆಯನ್ನು ತಮ್ಮ ಆಪ್ತರೂ, ಈ ಹಿಂದಿನ ಪಕ್ಷದ ಪರಮಾಪ್ತ ಗೆಳೆಯರಾದ ಭೈರತಿ ಬಸವರಾಜುರೊಡನೆ ತಮ್ಮ ನೋವನ್ನು ಹೇಳಿಕೊಂಡು ಇದೀಗ ಸುದ್ಧಿಯಾಗಿದ್ದಾರೆ.

 

ತುಮಕೂರಿನಲ್ಲಿ ಸುದ್ದಿಗೋಷ್ಠಿ ವೇಳೆ ಸಂಸದ ಜಿ.ಎಸ್ ಬಸವರಾಜ್ ಹಾಗೂ ಸಚಿವ ಬೈರತಿ ಬಸವರಾಜ್ ಅವರು ಸಚಿವ ಮಾಧುಸ್ವಾಮಿ ವಿರುದ್ಧ ಗುಸು, ಗುಸು ಎಂದು ಮಾತನಾಡಿಕೊಂಡಿರುವುದು ವೈರಲ್ ಆಗಿದೆ.

 

ಆ ಸಂಭಾಷಣೆಯಲ್ಲಿ  ಸಚಿವ ಮಾಧುಸ್ವಾಮಿ ವಿರುದ್ಧ ಸಂಸದ ಬಸವರಾಜು ಆರೋಪಗಳ ಸುರಿಮಳೆಯೇ ತಮ್ಮ ಆಪ್ತರ ಬಳಿ ಸುರಿಮಳೆಗೈದಿದ್ದಾರೆ. ಜಿ.ಎಸ್. ಬಸವರಾಜು ಬೈಯಲು ಆರಂಭಿಸುತ್ತಾರೆ. ಆಗ ಬೈರತಿ ಬಸವರಾಜ್ ಸುಮ್ಮನಿರು ಆಮೇಲೆ ಈ ಬಗ್ಗೆ ಮಾತನಾಡೋಣಾ ಎನ್ನುತ್ತಾರೆ, ಆದರೂ ಸುಮ್ಮನಿರದ ಸಂಸದರು ನೋಡು ಒಂದು ಸೀಟ್ ಬರಲ್ಲ ನಮ್ಮ ಪಕ್ಷಕ್ಕೆ ಆತರಹ ಮಾಡಿದ್ದಾನೆ, ಎನ್ನುತ್ತಾ ಮಾತಾಡಿದರೆ ಸಾಕು  ಹೊಡಿ, ಬಡಿ, ಕಡಿ ಅಂತಾನೆ. ಅವನ್ಯಾರೋ ಎಕ್ಸಿಕ್ಯುಟಿವ್ ಇಂಜಿನಿಯರ್‍ಗೆ ಹೇಳುತ್ತಾನೆ. ಹೆಂಡತಿ ಸೀರೆ ಒಗೆಯುವುದಕ್ಕೆ ಇವನು ಲಾಯಕ್ ಅಂತಾ. ಒಂದು ಹ್ಯಾಂಡ್ ಬಿಲ್ ಪ್ರಿಂಟ್ ಮಾಡಿಸಲ್ಲ. ಮೊನ್ನೆ ಸಾವಿರ ಕೋಟಿ  ಅವನ ಕ್ಷೇತ್ರಕ್ಕೆ ಡಿಕ್ಲೈರ್ ಮಾಡಿಕೊಂಡು ಬಂದಿದ್ದಾನೆ. ನಮಗೆ ಯಾರಿಗೂ ಇನ್ವಿಟೇಶನ್ ಇಲ್ಲ, ಕರೆಯೋದು ಇಲ್ಲ. ನಿಮ್ಮ ಇಲಾಖೆಗೆ ಬಂದು ಹೇಳಿದರೇ ತಲೆಕೆಡಿಸಕೊಳ್ಳಬೇಡಿ. ಎಂದು ಹೆಸರೇ ಹೇಳದೇ ಮಾಧುಸ್ವಾಮಿ ವಿರುದ್ಧ ಪರೋಕ್ಷವಾಗಿ ಜಿ.ಎಸ್ ಬಸವರಾಜ್ ವಾಗ್ದಾಳಿ ನಡೆಸಿದ್ದಾರೆ.

 

Leave a Reply

Your email address will not be published. Required fields are marked *

You cannot copy content of this page

error: Content is protected !!