ನಾವಿನ್ನು 60 ಸ್ಪೀಡ್ ನಲ್ಲಿ ಇದ್ದೀವಿ ಜನವರಿಗೆ 120 ರೀಚ್ ಆಗುತ್ತೆ_ಶಾಸಕ ಡಿ.ಸಿ ಗೌರಿಶಂಕರ್.

ನಾವಿನ್ನು 60 ಸ್ಪೀಡ್ ನಲ್ಲಿ ಇದ್ದೀವಿ ಜನವರಿಗೆ 120 ರೀಚ್ ಆಗುತ್ತೆ_ಶಾಸಕ ಡಿ.ಸಿ ಗೌರಿಶಂಕರ್.

 

 

 

ತುಮಕೂರು_ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಇತ್ತೀಚೆಗೆ ಬಿಜೆಪಿಯಿಂದ ಜೆಡಿಎಸ್ ಪಕ್ಷಕ್ಕೆ ಹಲವು ಕಾರ್ಯಕರ್ತರು ಸೇರ್ಪಡೆಗೊಳ್ಳುವ ಮೂಲಕ ಪಕ್ಷಾಂತರ ಪರ್ವ ಶುರುವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ತುಮಕೂರು ಗ್ರಾಮಂತರ ಜೆಡಿಎಸ್ ಶಾಸಕ ಡಿ.ಸಿ ಗೌರಿಶಂಕರ್ ಅವರು ನಾವಿನ್ನು ಸದ್ಯಕ್ಕೆ 60 ಕಿಲೋಮೀಟರ್ ಸ್ಪೀಡ್ ನಲ್ಲಿ ಇದ್ದೇವೆ ನಮ್ಮದಿನ್ನು 120 ಸ್ಪೀಡ್ ರೀಚ್ ಆಗಿಲ್ಲ ಜನವರಿ ವೇಳೆಗೆ ನಮ್ಮ ಸ್ಪೀಡ್ ರೀಚ್ ಆಗುವ ಮೂಲಕ ರಾಜಕಾರಣ ಏನು ಎಂಬುದನ್ನು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ತೋರಿಸುತ್ತೆವೆ ಎಂದರು.

 

 

 

 

ಮಾಧ್ಯಮದವರೊಂದಿಗೆ ಬಳ್ಳಗೆರೆಯ ನಮ್ಮ ನಿವಾಸದಲ್ಲಿ ಮಾತನಾಡಿರುವ ಶಾಸಕರು ಪಕ್ಷ ಸಂಘಟನೆ ಸೇರಿದಂತೆ ಇನ್ನು ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದು ತಮ್ಮ ಕ್ಷೇತ್ರದಲ್ಲಿ ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ಪಕ್ಷ ಸಂಘಟನೆಯನ್ನು ಮಾಡಲಿದ್ದು ಸದ್ಯಕ್ಕೆ ಕೆಲವರಿಗೆ 60 ಕಿಲೋಮೀಟರ್ ಸ್ಪೀಡನ್ನು ತಡೆಯಲಾಗುತ್ತಿಲ್ಲ ನಿದ್ದೆಯನ್ನು ಸಹ ಮಾಡುತ್ತಿಲ್ಲ….. ಇನ್ನು ಕೆಲವರಿಗೆ ಕನಸಲ್ಲೂ ನಾನೇ …ಮನಸಲ್ಲೂ ನಾನೇ…. ಎನ್ನುವ ಮೂಲ ಮತ್ತಷ್ಟು ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರುವ ಮುನ್ಸೂಚನೆಯನ್ನು ಶಾಸಕರು ನೀಡಿದ್ದಾರೆ.

 

 

 

 

 

ಇನ್ನು ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಪಕ್ಷ ಸೇರುವ ಹಾದಿಯಲ್ಲಿದ್ದು ಸದ್ಯಕ್ಕೆ ಕಾದು ನೋಡಿ ಎಂದಿದ್ದಾರೆ.

 

 

 

ವರದಿ- ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!