ವಿಜಯ ಭಾರತ ಇಂಪ್ಯಾಕ್ಟ್ – ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದ ಕುಟುಂಬಕ್ಕೆ ನೀರಿನ ವ್ಯವಸ್ಥೆ

 

 

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿಕ್ಕನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದಂತೆ ಕಡವಿಗೆರೆ ಗ್ರಾಮದ ಪರಿಶಿಷ್ಟ ಜಾತಿಯ ಮಂಜುಳಾ ಎನ್ನುವ ಮಹಿಳೆ ಸುಮಾರು ನಾಲ್ಕು ವರ್ಷಗಳಿಂದ ಮನೆಗೆ ಕುಡಿಯುವ ನೀರಿನ ಸಲುವಾಗಿ ಸ್ವಂತ ನಲ್ಲಿ ಸಂಪರ್ಕಕ್ಕಾಗಿ ನಾಲ್ಕು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು ವಿಷಯ ವಿಜಯ ಭಾರತ ಬಳಗಕ್ಕೆ ತಿಳಿದ ಕೂಡಲೇ ಬೆನ್ನುಹತ್ತಿದ ನಮ್ಮ ತಂಡ ಕೊನೆಗೂ ಕುಟುಂಬಕ್ಕೆ ಸಂಬಂಧಪಟ್ಟ ಪಂಚಾಯಿತಿ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಕುಟುಂಬಕ್ಕೆ ಆಸರೆಯಾಗಿದೆ.

 

 

 

 

 

 

ಇದರ ಬೆನ್ನುಹತ್ತಿದ ನಮ್ಮ ವಿಜಯ ಭಾರತ ಬಳಗ ಸಂಬಂಧಪಟ್ಟ ಶಿರಾ ಶಾಸಕರು ಸೇರಿದಂತೆ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಗಮನಕ್ಕೆ ತಂದು ನೀರಿಗಾಗಿ ಹೋರಾಟ ನಡೆಸುತ್ತಿದ್ದ ಕುಟುಂಬಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಕುಟುಂಬದ ನಾಲ್ಕು ವರ್ಷಗಳ ಹೋರಾಟಕ್ಕೆ ವಿಜಯ ಭಾರತ ಸಹಕಾರ ನೀಡಿ ಕುಟುಂಬಕ್ಕೆ ನೀರನ್ನು ಒದಗಿಸಿದೆ.

 

ಗ್ರಾಮದಲ್ಲಿ ಇದ್ದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕುಟುಂಬಕ್ಕೆ ವೈಯಕ್ತಿಕ ಕಾರಣಗಳಿಂದ ಕುಟುಂಬಕ್ಕೆ ನೀರನ್ನು ಒದಗಿಸಲು ತೊಂದರೆ ಉಂಟು ಮಾಡಿ ತಮ್ಮ ಚಾತುರ್ಯತೆ ತೋರುತ್ತಿದ್ದರು ಅವೆಲ್ಲವುಗಳನ್ನು ಬದಿಗೊತ್ತಿ ವಿಜಯ ಭಾರತ ಪತ್ರಿಕಾ ಬಳಗ ಕೊನೆಗೂ ಕುಟುಂಬಕ್ಕೆ ನೀರನ್ನು ಒದಗಿಸಿ ಕುಟುಂಬಕ್ಕೆ ಆಸರೆಯಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!