BREAKING NEWS: ‘ಬಿಜೆಪಿ ಕಾರ್ಯಕರ್ತ’ನನ್ನು ಹತ್ಯೆಗೆ ಯತ್ನಿಸಿದ ‘ಇಬ್ಬರು ಇಂಜಿನಿಯರ್’ ಅಮಾನತು

BREAKING NEWS: ‘ಬಿಜೆಪಿ ಕಾರ್ಯಕರ್ತ’ನನ್ನು ಹತ್ಯೆಗೆ ಯತ್ನಿಸಿದ ‘ಇಬ್ಬರು ಇಂಜಿನಿಯರ್’ ಅಮಾನತು

ತುಮಕೂರು: ಜಿಲ್ಲೆಯ ಎಸ್ಸಿ ಮೋರ್ಚಾ ಅಧ್ಯಕ್ಷರನ್ನು ಕಾರು ಹತ್ತಿಸಿ ಬೆಂಗಳೂರಿನಲ್ಲಿ ಹತ್ಯೆಗೆ ಯತ್ನಿಸಿದಂತ ಇಬ್ಬರು ಪಿಡಬ್ಲ್ಯೂಡಿ ಇಂಜಿನಿಯರ್ ಗಳನ್ನು, ರಾಜ್ಯ ಸರ್ಕಾರ ಅಮಾನತುಗೊಳಿಸಿ ಆದೇಶಿಸಿದೆ.

 

 

ತುಮಕೂರು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಓಂಕಾರೇಶ್ವರ ಅವರನ್ನು, ಏಪ್ರಿಲ್ 12, 2022ರಂದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂಜಿನಿಯರ್ ಎಂ. ಅಶ್ವಿನಿ ಹಾಗೂ ಎಇ ಶಂಭುಕುಮಾರ್ ಎಂಬುವರು ಕಾರು ಹತ್ತಿಸಿ ಹತ್ಯೆಗೆ ಯತ್ನಿಸಿದ್ದರು.

 

 

 

 

ಅಲ್ಲಿಂದ ಬಚಾವಾಗಿ ಬಂದಂತ ಓಂಕಾರೇಶ್ವರ ಅವರು, ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಇಂಜಿನಿಯರ್ ಎಂ.ಅಶ್ವಿನಿ ಬಂಧಿಸಲಾಗಿತ್ತು. ಈಗ ಅವರು ನ್ಯಾಯಾಂಗ ಬಂಧನದಲ್ಲೂ ಇದ್ದಾರೆ. ಮತ್ತೊಬ್ಬ ಸಹಾಯಕ ಎಂಜಿನಿಯರೇ ಶಂಭುಕುಮಾರ್ ತಲೆಮರೆಸಿಕೊಂಡಿದ್ದಾರೆ. ಈ ಇಬ್ಬರನ್ನು ರಾಜ್ಯ ಸರ್ಕಾರ ಈಗ ಅಮಾನತುಗೊಳಿಸಿ ಆದೇಶಿಸಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!