ತಿಪಟೂರಿನಲ್ಲಿ ಭೀಕರ ರಸ್ತೆ ಅಪಘಾತ ಸ್ಥಳದಲ್ಲಿ ಇಬ್ಬರು ದುರ್ಮರಣ.

ತಿಪಟೂರಿನಲ್ಲಿ ಭೀಕರ ರಸ್ತೆ ಅಪಘಾತ ಸ್ಥಳದಲ್ಲಿ ಇಬ್ಬರು ದುರ್ಮರಣ.

ತಿಪಟೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206 ಕೊನೆಹಳ್ಳಿಯಲ್ಲಿ ಗೂಡ್ಸ್ ವಾಹನ ಅಶೋಕ ಲೈಲ್ಯಾಂಡ್ ಹಾಗೂ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಸಿದ್ದಾಪುರದ ನಿವಾಸಿ ಶಮಂತಾಚಾರ್ (55), ಶಿವಪುರದ ನಿವಾಸಿ ಶಿವಣ್ಣ ( 50) ಇಬ್ಬರು ಸಾವನ್ನಪ್ಪಿದ್ದಾರೆ .  ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳನ್ನು ಶಮಂತಾಚಾರ್ ಮರಗೆಲಸದ ಕಾರ್ಯ ಮಾಡುತ್ತಿದ್ದು ಶಿವಣ್ಣ ತೆಂಗಿನ ಕಾಯಿ ಕೇಳುವ ಕೆಲಸವನ್ನು ಮಾಡುತ್ತಿದ್ದರು. ಈ ಪ್ರಕರಣವು ಹೊನ್ನವಳ್ಳಿ ಪೊಲೀಸ್ ಠಾಣೆಗೆ ದಾಖಲಾಗಿದೆ.

 

*ಸಾರ್ವಜನಿಕರ ಆಕ್ರೋಶ* 

 

 

ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು ರಸ್ತೆ ಅಭಿವೃದ್ಧಿಯ ಕೆಲಸವು ತುಂಬಾ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಹಾಗೂ ರಸ್ತೆಗಳಲ್ಲಿ ಸೂಚನಾ ಫಲಕಗಳಿಲ್ಲದೆ ಇರುವುದು ಅಪಘಾತಗಳಿಗೆ ಹೆಚ್ಚಿನ ಕಾರಣವಾಗಿದೆ ಎಂದು ತಿಳಿಸಿದರು. ಕಳೆದ ಎರಡು ತಿಂಗಳಲ್ಲಿ ತಿಪಟೂರು ನಿಂದ ಅರಸೀಕೆರೆ ಮಧ್ಯೆ ಸುಮಾರು 10ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!