ಕೆಪಿಟಿಸಿಎಲ್ ಪರಿಶಿಷ್ಟ ಜಾತಿ ಮತ್ತು ವರ್ಗಗಳ  ನೌಕರರ ಕಲ್ಯಾಣ ಸಂಘಕ್ಕೆ ಸದಸ್ಯರ ಅವಿರೋಧ ಆಯ್ಕೆ.

ಕೆಪಿಟಿಸಿಎಲ್ ಪರಿಶಿಷ್ಟ ಜಾತಿ ಮತ್ತು ವರ್ಗಗಳ  ನೌಕರರ ಕಲ್ಯಾಣ ಸಂಘಕ್ಕೆ ಸದಸ್ಯರ ಅವಿರೋಧ ಆಯ್ಕೆ.

 

 

ಕೆಪಿಟಿಸಿಎಲ್ ಪರಿಶಿಷ್ಟ ಜಾತಿ ಮತ್ತು ವರ್ಗಗಳನ್ನು ಕಾರರ ಕಲ್ಯಾಣ ಸಂಘ ಇದರ ಕೇಂದ್ರ ಸಮಿತಿ ಸದಸ್ಯರಾಗಿ ತುಮಕೂರು ವಿಭಾಗದಿಂದ ಟಿ ನಾಗರಾಜಪ್ಪ, ಹೆಚ್ಚು ಜಿ ರುದ್ರೇಶ್, ಮಧುಗಿರಿ ಉಪವಿಭಾಗದ ಅಂಜಯ್ಯ, ತಿಪಟೂರ್ ವಿಭಾಗದಿಂದ ಕೆಎಂ ರಾಜಶೇಖರಪ್ಪ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ನ ಕರ್ನಾಟಕದ ಎಲ್ಲ ಜಿಲ್ಲೆಗಳನ್ನು ಕಾರ್ಯನಿರ್ವಹಿಸುತ್ತಿರುವ ಕೆಪಿಟಿಸಿಎಲ್ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣ ಸಂಸ್ಥೆಗೆ 2021ರ ಜನವರಿ 27ರಂದುಚುನಾವಣೆ ನಡೆದಿದ್ದು ಚುನಾವಣೆಯಲ್ಲಿ ಕೇಂದ್ರ ಸಮಿತಿ ಸದಸ್ಯರಾಗಿ ತುಮಕೂರು ವಿಭಾಗದ ಕೆಪಿಟಿಸಿಎಲ್ ನಿಂದ ರುದ್ರೇಶ್, ಬೆಸ್ಕಾಂ ನಾಗರಾಜಪ್ಪ ಆಯ್ಕೆಯಾಗಿದ್ದಾರೆ.

 

ಕೇಂದ್ರ ಸಮಿತಿ ಸದಸ್ಯರ ಜೊತೆಗೆ ತುಮಕೂರು ವೃತ್ತದ ಸಂಘಟನಾ ಕಾರ್ಯದರ್ಶಿಯಾಗಿ ಮಧುಗಿರಿ ಉಪ ವಿಭಾಗದಿಂದ ಹೆಚ್ ಅಂಜಯ್ಯ ,ತಿಪಟೂರು ಉಪವಿಭಾಗ ದಿಂದ ಕೆಎಂ ರಾಜಶೇಖರ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಇವರು ಗಳಿಗೆ ಕೆಪಿಟಿಸಿಎಲ್ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣ ಸಂಸ್ಥೆಯ ಇತರ ಪದಾಧಿಕಾರಿಗಳು ಸದಸ್ಯರು ಇಂದು ಅಭಿನಂದನೆ ಸಲ್ಲಿಸಿದರು.

 

ಈ ವೇಳೆ ಕೆಪಿಟಿಸಿಎಲ್ ಪರಿಶಿಷ್ಟಜಾತಿ ಮತ್ತು ವರ್ಗಗಳ ಕಲ್ಯಾಣ ಸಂಸ್ಥೆಯ ತುಮಕೂರು ಜಿಲ್ಲಾಧ್ಯಕ್ಷರಾದ ಲಕ್ಷ್ಮೀನರಸಿಂಹ ಮೂರ್ತಿ, ಕಾರ್ಯದರ್ಶಿ ಭೀಮಾನಾಯಕ್, ಕೆಪಿಟಿಸಿಎಲ್ ಕೇಂದ್ರ ಸಮಿತಿಯ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಗಂಗಾಧರಪ್ಪ, ವೆಂಕಟರಮಣಪ್ಪ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!