ಲೋಕ್ ಅದಾಲತ್ ನಲ್ಲಿ ೧೪ ದಂಪತಿಗಳನ್ನು ಪುನರ್ ಒಂದು ಮಾಡಿದ ತುಮಕೂರು ಜಿಲ್ಲಾ ನ್ಯಾಯಾಲಯ.

ಲೋಕ್ ಅದಾಲತ್ ನಲ್ಲಿ ೧೪ ದಂಪತಿಗಳನ್ನು ಪುನರ್ ಒಂದು ಮಾಡಿದ ತುಮಕೂರು ಜಿಲ್ಲಾ ನ್ಯಾಯಾಲಯ.

 

 

ತುಮಕೂರು:ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ವಿವಿಧ ಪ್ರಕರಣಗಳಲ್ಲಿ ಇಂದು ನಡೆದ ಲೋಕ್ ಅದಾಲತ್ ನಲ್ಲಿ ತುಮಕೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯ,ಪಾವಗಡ,ತುರುವೇಕೆರೆ,ಚಿಕ್ಕನಾಯಕನಹಳ್ಳಿ,ಗುಬ್ಬಿಯ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಪ್ರಕರಣಗಳಲ್ಲಿ ನ್ಯಾಯಾಧೀಶರು ದಂಪತಿಗಳಿಗೆ ಬುದ್ಧಿ ಹೇಳಿ,ಅವರ ಮನವೊಲಿಸಿದ ಪರಿಣಾಮವಾಗಿ ೧೪ ಜೋಡಿಗಳು ಪುನರ್ ಒಂದಾಗಿ ಮನೆಗೆ ಹೋದ ಘಟನೆಗೆ ನ್ಯಾಯಾಲಯದಲ್ಲಿದ್ದ ವಕೀಲರು,ಕಕ್ಷಿದಾರರು,ಸಾರ್ವಜನಿಕರು ಸಾಕ್ಷಿಯಾದರು.

 

 

 

ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ಹಾರ ಬದಲಿಸಿ ೭ ದಂಪತಿಗಳನ್ನು ಒಂದು ಮಾಡಿ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಕೆ.ಬಿ.ಗೀತಾರವರು ದಂಪತಿಗಳು ಚಿಕ್ಕ ಚಿಕ್ಕ ವಿಚಾರಗಳಿಗೆ ಮನಸ್ಸನ್ನು ಕೆಡಿಸಿಕೊಂಡು,ಕೆಲವೊoದು ಸಲ ಬೇರೆಯವರ ಮಾತು ಕೇಳಿ ಸಹ ನ್ಯಾಯಾಲಯಗಳಿಗೆ ವಿಚ್ಛೇದನಕ್ಕೆ,ಅಥವಾ ಜೀವನಾಂಶಗಳಿಗೆ ದಾವೆಗಳನ್ನು ಹಾಕಿದ್ದು,ಅವರಿಗೆ ಕಳೆದ ಕೆಲವು ದಿನಗಳಿಂದ ನಮ್ಮ ನ್ಯಾಯಾಧೀಶರುಗಳು,ಎರಡೂ ಕಡೆಯ ವಕೀಲರು ಬುದ್ಧಿ ಹೇಳಿದ ಪರಿಣಾಮ ಇಂದು ೭ ದಂಪತಿಗಳು ಇಲ್ಲಿ ನಮ್ಮ ಮುಂದೆ ಪರಸ್ಪರ ಹಾರ ಬದಲಿಸಿಕೊಂಡು ಪರಸ್ಪರ ಸಿಹಿ ತಿನಿಸಿ ಮನೆಗೆ ಹೋಗುತ್ತಿದ್ದಾರೆ,ಮತ್ತೆ ಎಂದೂ ನ್ಯಾಯಾಲಯಕ್ಕೆ ದಾವೆ ಹಾಕಿಕೊಂಡು ಬರಬೇಡಿ, ಅವರಿಗೆ ಭಗವಂತ ಒಳ್ಳೆಯದನ್ನು ಮಾಡಲಿ ಅವರ ಜೀವನ ಸುಖಕರವಾಗಿ, ಸಂತೋಷದಾಯಕವಾಗಿ,ನೆಮ್ಮದಿಯಾಗಿ ಇರಲಿ ಎಂದು ಶುಭ ಹಾರೈಸಿದರು.

 

 

 

 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ನೂರುನ್ನೀಸರವರು ಸಮರಸವೇ ಜೀವನ,ಪರಸ್ಪರ ವಿರಸ ಮರೆತು ಜೀವನದಲ್ಲಿ ಹೊಂದಿಕೊoಡು ಹೋಗಬೇಕು,ದೊಡ್ಡವರು ಸೇರಿ ಮಾಡಿದ ಮದುವೆಗೆ ಅರ್ಥ ತನ್ನಿ,ಮನಸ್ಸುಗಳನ್ನು ಕೆಡಿಸಿಕೊಳ್ಳದೆ ಸಂತೋಷವಾಗಿ ಬಾಳಿ ಬದುಕಿ ಬೇರೆಯವರಿಗೆ ಮಾದರಿ ಆಗುವುದಲ್ಲದೆ,ಸಮಾಜಕ್ಕೆ ತಾವುಗಳು ಮಾದರಿಯಾಗಿ ಎಂದು ಹೇಳಿದರು.

 

 

 

 

ಕೌಟುಂಬಿಕ ನ್ಯಾಯಾಲಯದ ೧ನೇ ಅಧಿಕ ಪ್ರಧಾನ ನ್ಯಾಯಾಧೀಶರಾದ ಎನ್.ಮುನಿರಾಜ ರವರು ಇಂದು ಪುನಃ ಒಂದಾದ ದಂಪತಿಗಳು ಇತರ ಪ್ರಕರಣಗಳ ದಂಪತಿಗಳಿಗೆ ಮಾದರಿಯಾಗಲಿ,ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳದೆ ಸಂತೋಷದಿoದ ಜೀವನ ಕಳೆಯಬೇಕು ಇರುವುದೊಂದೇ ಜೀವನ ಅದನ್ನು ಸಂತೋಷವಾಗಿ ಕಳೆಯಬೇಕು,ಭಗವಂತ ನೀಡಿದ ಈ ಜನ್ಮಕ್ಕೆ ಅರ್ಥ ಬರುವಂತೆ ಜೀವನ ನಡೆಸಬೇಕು ಆಗ ಮಾತ್ರ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದು ಹೇಳಿದರು.

 

 

 

 

ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ೭ ದಂಪತಿಗಳು ಒಂದಾದರು,ತುಮಕೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ೭ ದಂಪತಿಗಳು ಪುನಃ ಒಂದಾದರು ಒಟ್ಟು ೧೪ ದಂಪತಿಗಳು ಪುನಃ ಒಂದಾಗಿ ಮನೆಗೆ ಹೋದರು.

 

 

 

ಈ ಸಂದರ್ಭದಲ್ಲಿ ನರಸಿಂಹಪ್ಪ, ವಕೀಲರುಗಳು ಕಕ್ಷಿದಾರರು,ಸಾರ್ವಜನಿಕರು,ಆರಕ್ಷಕ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!