ತುಮಕೂರು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಹಾಡು ಹೇಳಿದ ಜಿಲ್ಲಾಧಿಕಾರಿ.

ತುಮಕೂರು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಹಾಡು ಹೇಳಿದ ಜಿಲ್ಲಾಧಿಕಾರಿ.

 

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿ, ತಡಕಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕನಹಳ್ಳಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ವೇದಿಕೆಯ ಮೇಲೆ ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ…..

ಹಾಡು ಹೇಳಿದ್ದಾರೆ ನಂತರ ಗ್ರಾಮೀಣ ಸೊಬಗಿನ ಹಾಡಿಗೆ ತಾಳ ಹಾಕುತ್ತಾ ತಾವು ಕೂಡ ಕೆಲಕಾಲ ಮೈಮರೆತು ತಾಳ ಹಾಕಿದ್ದಾರೆ ಈ ಮೂಲಕ ರೈತರು, ನಾಗರಿಕರನ್ನು ರಂಜಿಸಿದರು.

 

ಇದರ ಜೊತೆಯಲ್ಲೇ ಅಪಾರ ಜಿಲ್ಲಾಧಿಕಾರಿ  ಸಹ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಅವರ ಜೊತೆಗೂಡಿ ಹಾಡು ಹೇಳಿದ್ದಾರೆ.

 

ಇನ್ನು ಜಿಲ್ಲಾಧಿಕಾರಿಗಳು ಹಾಗೂ ಅಪಾರ ಜಿಲ್ಲಾಧಿಕಾರಿಗಳು ಹೇಳಿದ ಹಾಡನ್ನು ಕೇಳಿದ ಗ್ರಾಮಸ್ಥರು ಅಧಿಕಾರಿಗಳ ನಡೆಗೆ ಮನಸೋತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ವರದಿ_ ಮಾರುತಿ ಪ್ರಸಾದ್ ತುಮಕೂರು

One thought on “ತುಮಕೂರು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಹಾಡು ಹೇಳಿದ ಜಿಲ್ಲಾಧಿಕಾರಿ.

Leave a Reply

Your email address will not be published. Required fields are marked *

You cannot copy content of this page

error: Content is protected !!