ವ್ಯವಸಾಯ ಮಾಡುವಾಗ ಟಿಲ್ಲರ್ ಗೆ ಸಿಲುಕಿ ವ್ಯಕ್ತಿ ಮೃತ.

ವ್ಯವಸಾಯ ಮಾಡುವಾಗ ಟಿಲ್ಲರ್ ಗೆ ಸಿಲುಕಿ ವ್ಯಕ್ತಿ ಮೃತ.

 

 

ತುಮಕೂರು_ತುಮಕೂರು ತಾಲೂಕಿನ ಬೆಳ್ಳಾವಿ ಹೋಬಳಿಯ ಬುಗುಡನಹಳ್ಳಿ ಗ್ರಾಮದ ರೈತ ನಾಗರಾಜು (51) ಎಂಬುವವರು ಬುಗುಡನಹಳ್ಳಿ ಯ ತಮ್ಮ ಜಮೀನಿನಲ್ಲಿ ಉಳುಮೆ ಮಾಡುವಾಗ ಆಕಸ್ಮಿಕವಾಗಿ ಟಿಲ್ಲರ್ ಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

 

 

ಇನ್ನು ಮೃತ ನಾಗರಾಜು ಹತ್ತು ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿ ಉಳುಮೆ ಮಾಡಲು ಪವರ್ ಟಿಲ್ಲರ್ ಅನ್ನು ಖರೀದಿ ಮಾಡಿದರು ಈ ಮೂಲಕ ತಮ್ಮ ಜಮೀನುಗಳನ್ನು ಉಳುಮೆ ಮಾಡಿಕೊಳ್ಳುತ್ತಿದ್ದರು ಆದರೆ ಆಕಸ್ಮಿಕವಾಗಿ ಇಂದು ಬೆಳಗ್ಗೆ ಟಿಲ್ಲರ್ ಗೆ ಸಿಲುಕಿಕೊಂಡಿದ್ದು ಎಡಗೈ ಹಾಗೂ ಹೃದಯ ಭಾಗಕ್ಕೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು.

 

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ನಾಗರಾಜು ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಈ ಬಗ್ಗೆ ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!