ಮಹಿಳೆಯ ಸರ ಕದ್ದು ಪರಾರಿಯಾಗುತ್ತಿದ್ದ ಸರಗಳ್ಳರನ್ನು ಹಿಡಿದ ಗ್ರಾಮಸ್ಥರು

ಮಹಿಳೆಯ ಸರ ಕದ್ದು ಪರಾರಿಯಾಗುತ್ತಿದ್ದ ಸರಗಳ್ಳರನ್ನು ಹಿಡಿದ ಗ್ರಾಮಸ್ಥರು

ತುಮಕೂರು_ಮಹಿಳೆಯೋರ್ವರ ಮಾಂಗಲ್ಯ ಸರ ಎಗರಿಸಿ ಪರಾರಿಯಾಗುತ್ತಿದ್ದ ಕಳ್ಳರನ್ನು ಗ್ರಾಮಸ್ಥರು ಸಿನಿಮಿಯ ಮಾದರಿಯಲ್ಲಿ ಹಿಂಬಾಲಿಸಿ ಹಿಡಿದಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಸೆರೆಸಿಕ್ಕ ಕಳ್ಳರನ್ನು ಕಟ್ಟಿ ಹಾಕಿ ಪೊಲೀಸರ ಕೈಗೊಪ್ಪಿಸುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದು ತುರುವೇಕೆರೆ ತಾಲ್ಲೂಕಿನ ಹಾಲಗೊಂಡನಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಕಳ್ಳರಿಬ್ಬರು ಸದ್ಯ ಪೊಲೀಸರ ಅತಿಥಿಯಾಗಿರುವ ಘಟನೆ ವರದಿಯಾಗಿದೆ

 

ತೋಟಕ್ಕೆ ತೆರಳಿದ್ದ ಸುಜಾತ ಎಂಬ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ಸರಗಳ್ಳರು, ಮಹಿಳೆಯ ಕಣ್ಣಿಗೆ ಕಾರದಪುಡಿ ಎರಚಿ, ಮಹಿಳೆಯ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನುಕದಿದ್ದರು.

 

ಬಳಿಕ ತಾವು ಬಂದಿದ್ದ ಪಲ್ಸರ್ ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದರು ಈ ವೇಳೆ ಸಿನಿಮಿಯ ಮಾದರಿಯಲ್ಲಿ ಕಳ್ಳರನ್ನು ಬೆನ್ನಟ್ಟಿದ ಪೊಲೀಸರು, ಅವರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಕಳ್ಳರು ತಪ್ಪಿಸಿಕೊಳ್ಳದಂತೆ ಹಗ್ಗದಿಂದ ಅವರ ಕೈಗಳನ್ನು ಕಟ್ಟಿ ಮಳೆಯಲ್ಲೇ ನಿಲ್ಲಿಸಿದ್ದರು. ನಂತರ ದಂಡಿನ ಶಿವರ ಪೊಲೀಸರ ವಶಕ್ಕೆ ಆರೋಪಿಗಳಿಬ್ಬರನ್ನು ನೀಡಲಾಗಿದೆ.

 

ಆರೋಪಿಗಳನ್ನ ಹಿಡಿದಿರುವ ವಿಡಿಯೋ ಈಗ ವೈರಲ್ ಆಗಿದೆ

Leave a Reply

Your email address will not be published. Required fields are marked *

You cannot copy content of this page

error: Content is protected !!