ಸಾವರ್ಕರ್ ಫೋಟೋ ಹರಿದು ಹಾಕಿ ದುಷ್ಕೃತ್ಯ ಮೆರೆದ ಕಿಡಿಗೇಡಿಗಳು

 ಸಾವರ್ಕರ್ ಫೋಟೋ ಹರಿದು ಹಾಕಿ ದುಷ್ಕೃತ್ಯ ಮೆರೆದ ಕಿಡಿಗೇಡಿಗಳು.

 

ತುಮಕೂರು:  ಕಿಡಿಗೇಡಿಗಳು  ತುಮಕೂರು ನಗರದಲ್ಲಿ  ಸಾವರ್ಕರ್​​ ಫೋಟೋ ಹರಿದು ಹಾಕಿರುವ ಘಟನೆ ನಡೆದಿದೆ.

 

ತುಮಕೂರು ನಗರದ ಎಂಪ್ರೆಸ್ ಕಾಲೇಜು ಮುಂಭಾಗದಲ್ಲಿ ಹಾಕಿರುವ ಫ್ಲೆಕ್ಸ್‌ ಗಳ ಒಂದರಲ್ಲಿ ವೀರಸಾವರ್ಕರ್‌ ಫೋಟೋ ಇರುವ ಫ್ಲೆಕ್ಸ್‌ ಬ್ಯಾನರ್‌ವನ್ನು ಹರಿದು ಹಾಕಿ ದುಷ್ಕೃತ್ಯ ಮೆರದಿದ್ದಾರೆ.

 

 

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಜ್ಯೋತಿ ಗಣೇಶ್, ತುಮಕೂರು ನಗರದ ವಿವಿಧ ಭಾಗಗಳಲ್ಲಿ  ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವಿರುವ ಫ್ಲೆಕ್ಸ್​ ಹಾಕಿಸಿದ್ದರು.

 

 

ಮೂರು ದಿನಗಳ ಹಿಂದೆ ಫ್ಲೆಕ್ಸ್​ ಹಾಕಲಾಗಿದ್ದು, ಸ್ವಾತಂತ್ರ್ಯ ದಿನೋತ್ಸವದ  ರಾತ್ರಿ ಕಿಡಿಗೇಡಿಗಳು  ಸಾರ್ವಕರ್ ಭಾವಚಿತ್ರ ಇರುವ ಫ್ಲೆಕ್ಸ್​ ಅನ್ನು ಮಾತ್ರ ಹರಿದು ಹಾಕಿದ್ದಾರೆ.

ಬೆಳ್ಳಂ ಬೆಳಗ್ಗೆ ಪಾಲಿಕೆ ವತಿಯಿಂದ ಫ್ಲಕ್ಸ್ಗಳ ತೆರವು. ಇನ್ನು ಮಂಗಳವಾರ ಬೆಳಗ್ಗೆ ತುಮಕೂರು ಮಹಾನಗರ ಪಾಲಿಕೆ ವತಿಯಿಂದ ಎಂಪ್ರೆಸ್ ಬಾಲಕಿಯರ ಶಾಲೆ ಮುಂದೆ ಅಳವಡಿಸಿದ್ದ ಫ್ಲಕ್ಸ್ ಗಳನ್ನು ತೆರವುಗೊಳಿಸಲಾಗಿದೆ.

 

ತುಮಕೂರು ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!