ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಹತ್ಯೆಗೈದ ದುಷ್ಕರ್ಮಿಗಳು….

ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಹತ್ಯೆಗೈದ ದುಷ್ಕರ್ಮಿಗಳು….?.

 

 

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿ ಕರಿಶೆಟ್ಟಿಹಟ್ಟಿ ಗ್ರಾಮದ ಬಳಿ ಮಣ್ಣಮ್ಮ ದೇವಾಲಯಕ್ಕೆ ಹೋಗುವ ರಸ್ತೆಯ ಸೇತುವೆ ಬಳಿ ಚೌಕೇನಹಳ್ಳಿ ಗ್ರಾಮದ ವಾಸಿ ಮೂಡ್ಲಯ್ಯ (42) ಎಂಬುವವರು ತಮ್ಮ ತೋಟದಿಂದ ರಾತ್ರಿ12ರ ಸಮಯದಲ್ಲಿ ತನ್ನ ಮನೆಗೆ ಸ್ಪ್ಲೆಂಡರ್ ಬೈಕ್ ನಲ್ಲಿ ವಾಪಸ್ ತೆರಳುತ್ತಿರುವಾಗ ದುಷ್ಕರ್ಮಿಗಳು ಹಿಂಬಾಲಿಸಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗೆ ಗುಬ್ಬಿ ತಾಲೂಕಿನ ಪೆದ್ದನಹಳ್ಳಿ ಇಬ್ಬರು ದಲಿತ ಯುವಕರ ಹತ್ಯೆ ಮಾಸುವ ಮುನ್ನವೇ ಮತ್ತೋರ್ವ ವ್ಯಕ್ತಿಯ ಹತ್ಯೆ ಗುಬ್ಬಿ ತಾಲೂಕಿನ ಜನರ ಆತಂಕಕ್ಕೆ ಎಡೆಮಾಡಿದೆ.

 

ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!