ಗುಂಪುಗಳ ನಡುವೆ ಮಾರಾಮಾರಿ ಗಲಾಟೆ ಹಲ್ಲೆಗೊಳಗಾಗಿದ್ದ ಯುವಕ ಸಾವು ತುರುವೇಕೆರೆಯಲ್ಲಿ ಘಟನೆ.

ಗುಂಪುಗಳ ನಡುವೆ ಮಾರಾಮಾರಿ ಗಲಾಟೆ ಹಲ್ಲೆಗೊಳಗಾಗಿದ್ದ ಯುವಕ ಸಾವು ತುರುವೇಕೆರೆಯಲ್ಲಿ ಘಟನೆ.

 

ತುಮಕೂರು -ಎರಡು ಗುಂಪುಗಳ ನಡುವೆ ಮಾರಾಮಾರಿ ಸಂಘರ್ಷ ನಡೆದು ಘಟನೆಯಲ್ಲಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ನಡೆದಿದೆ.

 

 

 

ಜೂನ್ ಮೂರರಂದು ತುರುವೇಕೆರೆ ಟೌನ್ ನಲ್ಲಿ ಹಲ್ಲೆ ಮಾಡಲಾಗಿದ್ದು ಹಲ್ಲೆಗೊಳಗಾಗಿದ್ದ ಯುವಕ ಮಾರಣಾಂತಿಕ ಗಾಯಗಳಿಂದ ಗಾಯಗೊಂಡಿದ್ದು ಕೊನೆಗೆ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾನೆ.

 

ಘಟನೆಯಲ್ಲಿ ಮೃತಪಟ್ಟ ಯುವಕ ದಿಲೀಪ್

 

 

ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಇನ್ನು ಮೃತಪಟ್ಟ ಯುವಕನನ್ನು ದಿಲೀಪ್ (22) ಎಂದು ಗುರುತಿಸಲಾಗಿದ್ದು ಮೃತ ಯುವಕ ತಿಪಟೂರು ತಾಲೂಕಿನ ತಡಸೂರು ಭೋವಿ ಕಾಲೋನಿಯ ಯುವಕ ದಿಲೀಪ್ ಕೆಲ ವರ್ಷಗಳಿಂದ ತುರುವೇಕೆರೆ ಟೌನ್ ದೇವೇಗೌಡ ಬಡಾವಣೆಯಲ್ಲಿ ಕುಟುಂಬ ಸಮೇತರಾಗಿ ವಾಸ ಮಾಡುತ್ತಿದ್ದನು.

 

ಗಲಾಟೆಯಲ್ಲಿ  ಸುಟ್ಟು ಹೋದ ಬೈಕ್ ಗಳು

ಗುರುವಾರ ಮಧ್ಯಾಹ್ನ ಬೆಳ್ಳೂರಿನ ಚುಂಚನಗಿರಿ ಆಸ್ಪತ್ರೆಯಲ್ಲಿ ದಿಲೀಪ್ ಮೃತಪಟ್ಟಿದ್ದು ಡ್ರೈವರ್ ವೃತ್ತಿ ಮಾಡುತ್ತಿದ್ದ ಎನ್ನಲಾಗಿದೆ.

 

 

ಇನ್ನು ದುಷ್ಕರ್ಮಿಗಳು ಗಲಾಟೆ ಮಾಡುವ ಸಂದರ್ಭದಲ್ಲಿ ಮೂರು ಬೈಕ್ ಗಳನ್ನು ಸುಟ್ಟು ಹಾಕಿದ್ದು ಘಟನೆಗೆ ಸಂಬಂಧಿಸಿದಂತೆ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

ಘಟನೆಗೆ ಸಂಬಂಧಿಸಿದಂತೆ ಮಾರಣಾಂತಿಕ ಹಲ್ಲೆ ನಡೆಸುತ್ತಿರುವ ವಿಡಿಯೋವನ್ನೂ ಸ್ಥಳೀಯರು ಮೋಬೈನಲ್ಲಿ ಸೆರೆಹಿಡಿದಿದ್ದು ಸಧ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

 

ಘಟನೆಯನ್ನು ಘಂಬೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ

Leave a Reply

Your email address will not be published. Required fields are marked *

You cannot copy content of this page

error: Content is protected !!