ರಾಜ್ಯದ ಸಾಮರಸ್ಯ ಎಂದಿಗೂ ಕೂಡ ಹಾಳಾಗಬಾರದು _ಶಾಸಕ ಡಿ ಸಿ ಗೌರಿಶಂಕರ್.

ರಾಜ್ಯದ ಸಾಮರಸ್ಯ ಎಂದಿಗೂ ಕೂಡ ಹಾಳಾಗಬಾರದು _ಶಾಸಕ ಡಿ ಸಿ ಗೌರಿಶಂಕರ್.

 

 

ತುಮಕೂರು_ಇಂದು ನಾಡಿನ ಜನತೆ ರಾಜ್ಯದಲ್ಲಿ ನಡೆಯುತ್ತಿರುವ ಅರಾಜಕತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಧರ್ಮ ಧರ್ಮದ ನಡುವೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಡಿ ಸಿ ಗೌರಿಶಂಕರ್ ತಿಳಿಸಿದರು.

 

 

ಇನ್ನು ಇದುವರೆಗಿನ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಯಾವತ್ತೂ ಕೂಡ ಇಂತಹ ವಿಷಯಗಳಿಗೆ ಮಹತ್ವ ಸಿಕ್ಕಿರಲಿಲ್ಲ ಆದರೆ ಇಂದು ಧರ್ಮ-ಧರ್ಮದ ನಡುವೆ ಯುದ್ಧ ಶುರು ಆಗಿದೆ ಇದು ಆದಷ್ಟು ಶೀಘ್ರ ಅಂತ್ಯವಾಗಬೇಕು ಎಂದರು.

 

 

ರಾಜ್ಯದ ಸಾಮರಸ್ಯ ಯಾವತ್ತೂ ಕೂಡ ಹಾಳಾಗಬಾರದು ಇನ್ನು ಇದುವರೆಗೂ ಎಲ್ಲಾ ಸಮುದಾಯಗಳು ಒಟ್ಟಾಗಿ ರಾಜ್ಯದಲ್ಲಿ ಇವೆ.

 

 

ಅಂತಹ ಒಗ್ಗಟ್ಟನ್ನು ಒಡೆಯುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಇನ್ನು ರಾಜ್ಯದಲ್ಲಿ ಹಿಂದೂ-ಮುಸ್ಲಿಂ-ಕ್ರೈಸ್ತ ಸಮುದಾಯಗಳು ಅಣ್ಣ-ತಮ್ಮಂದಿರಂತೆ ಬದುಕುತ್ತಿವೆ ಹಾಗಾಗಿ ಅದರಂತೆ ಎಲ್ಲಾ ಸಮುದಾಯದ ಜನರು ಅಣ್ಣತಮ್ಮಂದಿರಂತೆ ಬಾಳಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದರು.

 

ವರದಿ_ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!