ತುಮಕೂರಿನಲ್ಲಿ ಹಾಡುಹಗಲೇ ಪುಂಡರ ಹೊಡೆದಾಟ.

ತುಮಕೂರಿನಲ್ಲಿ ಹಾಡುಹಗಲೇ ಪುಂಡರ ಹೊಡೆದಾಟ ಬೆಚ್ಚಿಬಿದ್ದ ಸಾರ್ವಜನಿಕರು.

 

 

 

ತುಮಕೂರು _ತುಮಕೂರಿನ ಪ್ರತಿಷ್ಠಿತ ರಸ್ತೆಗಳಲ್ಲಿ ಒಂದಾದ ಮಹಾತ್ಮಗಾಂಧಿ ರಸ್ತೆಯ ಕೃಷ್ಣ ಟಾಕೀಸ್ ಹಿಂಭಾಗ ಗುರುವಾರ ಸಂಜೆ ಕೆಲ ಪುಂಡರು ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿ ಕೊಂಡಿದ್ದು ಇನ್ನು ಯುವಕರು ಹೊಡೆದಾಡುತ್ತಿದ್ದ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.

 

ಗುರುವಾರ ಸಂಜೆ ಐದು ಮೂವತ್ತರ ಸಮಯದಲ್ಲಿ ಘಟನೆ ನಡೆದಿದ್ದು ಕ್ಷುಲ್ಲಕ ಕಾರಣಕ್ಕೆ ಯುವಕರು ಜನನಿಬಿಡ ಪ್ರದೇಶದಲ್ಲಿ ಹೊಡೆದಾಡಿ ಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಎಡೆಮಾಡಿದೆ.

 

 

ಹಾಡುಹಗಲೇ ಯುವಕನೊಬ್ಬನಿಗೆ ಸ್ಥಳದಲ್ಲಿದ್ದ ಯುವಕರು ಬಾಟಲ್ ಹಾಗೂ ಇತರೆ ವಸ್ತುಗಳಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು ಹಲ್ಲೆಗೊಳಗಾದ ಯುವಕ ತೀವ್ರ ರಕ್ತಸ್ರಾವದಿಂದ ಓಡಾಡುತ್ತಿದ್ದು ಇನ್ನು ಹಲ್ಲೆಗೊಳಗಾದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!