ರಾಷ್ಟ್ರಧ್ವಜಕ್ಕೆ  ಅಗೌರವ ತೋರಿದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವರೇ ಮೇಲಧಿಕಾರಿಗಳು.

ರಾಷ್ಟ್ರಧ್ವಜಕ್ಕೆ  ಅಗೌರವ ತೋರಿದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವರೇ ಮೇಲಧಿಕಾರಿಗಳು.

 

 

 

ತುರುವೇಕೆರೆ_ ಇಂದಿನ ಗಣರಾಜ್ಯೋತ್ಸವ ಕಾಯ೯ಕ್ರಮದಲ್ಲಿ ದ್ವಜಾರೋಹಣ ಮಾಡಲು ಪಂಚಾಯತ್ ರಾಜ್ ಇಂಜನಿಯರ್ ಉಪ ವಿಭಾಗ / ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈಮ೯ಲ್ಯ ಇಲಾಖೆ ತುರುವೇಕೆರೆ ತಾಲ್ಲೂಕು ತುರುವೇಕೆರೆ ಇಲ್ಲಿ ರಾಷ್ಟ್ರ ದ್ವಜವನ್ನು ಒಗೆದು ಒಣಗಿ ಹಾಕುವ ಮೂಲಕ ರಾ‌ಷ್ಟ್ರ ದ್ವಜಕ್ಕೆ ಅವಮಾನ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

 

 

ಇನ್ನೂ ದೇಶದ ಪ್ರತಿಕವಾಗಿರುವ ರಾಷ್ಟ್ರಧ್ವಜಕ್ಕೆ ತನ್ನದೇ ಆದ ಗೌರವಿಸುವಂತಹ ಗೌರವವನ್ನು ಅಧಿಕಾರಿಗಳು ಕಾಪಾಡಬೇಕಾದ್ದು ಅಧಿಕಾರಿಗಳ ಕರ್ತವ್ಯ.

 

ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಬೇಕಾದ ಅಧಿಕಾರಿಗಳು ಈ ರೀತಿಯಾಗಿ  ನಡೆದುಕೊಂಡಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

 

ಈ ರೀತಿ ದ್ವಜಕ್ಕೆ ಅವಮಾನ ಮಾಡಿರುವ ಅಧಿಕಾರಿಗಳ ವಿರುದ್ದ ಮೇಲಾಧಿಕಾರಿಗಳು ಶಿಸ್ತುಕ್ರಮ ಜರುಗಿಸುತ್ತಾರ ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!