ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ ಕದೀಮರು

 

 

ಮಧುಗಿರಿ : ಪಟ್ಟಣದಲ್ಲಿ ಐತಿಹಾಸಿಕ ಶ್ರೀ ಮಲ್ಲೇಶ್ವರಸ್ವಾಮಿ ದೇವಸ್ಥಾನ ಹಾಗೂ ಸಿದ್ದಾಪುರ ಗೇಟ್ ಬಳಿಯಿರುವ ನಂಜಮ್ಮನ ಮಠ ದಲ್ಲಿರುವ ದೇವಾಲಯಗಳ ಬಳಿ ಕಳ್ಳರು ಕನ್ನ ಹಾಕಿರೋ ಘಟನೆ ಯುಗಾದಿ ಹಬ್ಬದ ಹಿಂದಿನ ರಾತ್ರಿ ನಡೆದಿದೆ.

ಪಟ್ಟಣದ ಐತಿಹಾಸಿಕ ಶ್ರೀ ಮಲ್ಲೇಶ್ವರ ಸ್ವಾಮಿ ದೇವಾಲಯದ 3ಬಾಗಿಲುಗಳ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಹುಂಡಿಯನ್ನು ಒಡೆದು ಹಾಕಿ ಅದರಲ್ಲಿದ್ದ ಹಣವನ್ನು ದೋಚಿಕೊಂಡು ಹೋಗಿದ್ದಾರೆ .

ನಂತರ ಸಿದ್ಧಾಪುರ ಗೇಟ್ ಬಳಿ ಇರುವ ನಂಜಮ್ಮನ ಮಠದ ದೇವಸ್ಥಾನದ ಹುಂಡಿ ಹಣವನ್ನು ಸಹ ಒಡೆದು ಹಣ ಕದ್ದಿದ್ದಾರೆ.

ಘಟನಾ ಸ್ಥಳಕ್ಕೆ ಸಿಪಿಐ ಎಂ ಎಸ್ ಸರ್ದಾರ್ ಧಾರ್ಮಿಕ ಮುಖಂಡ ಎಂ ಜಿ ಶ್ರೀನಿವಾಸ್ ಮೂರ್ತಿ ಪುರಸಭಾ ಮಾಜಿ ಅಧ್ಯಕ್ಷ ಎಂ ವಿ ಗೋವಿಂದರಾಜು ಧಾರ್ಮಿಕ ಮುಂದಾಳು ದೊಲಿಬಾಬು, ಜೋಡಿದಾರ್ ಮುರಳಿ ಸ್ವಾಮಿಗಳು ಪ್ರಧಾನ ಅರ್ಚಕ ನಟರಾಜದಿಕ್ಷೀತ್,ಕಾರ್ತಿಕ್ ಸ್ವಾಮಿ ಇದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!