ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ನೆರವಾದ ಸಿರಾ ಶಾಸಕ ರಾಜೇಶ್ ಗೌಡ.

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ನೆರವಾದ ಸಿರಾ ಶಾಸಕ ರಾಜೇಶ್ ಗೌಡ.

 

ಶಿರಾ _ಬೈಕ್ ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದ ಗಾಯಾಳುಗಳಿಗೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಶಿರಾ ಶಾಸಕ ಡಾಕ್ಟರ್ ರಾಜೇಶ್ ಗೌಡ ರವರು ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ತಮ್ಮದೇ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಗಾಯಾಳುಗಳಿಗೆ ನೆರವಾಗಿದ್ದಾರೆ.

 

 

ಶಿರಾ ಅಮರಾಪುರ ರಸ್ತೆ ಯಲ್ಲಿ ಬರುವ ತೋಗರುಗುಂಟೆ ಗೇಟ್ ಬಳಿ ಮದಲೂರು ಗ್ರಾಮದ ಭೂತ ರಾಜು ಹಾಗೂ ಓಬಣ್ಣ ರವರ ಬೈಕ್ ನಲ್ಲಿ ತೆರಳುವವೇಳೆ ಅಪಘಾತ ಸಂಭವಿಸಿತ್ತು ಅಪಘಾತದಲ್ಲಿ ಗಾಯಗೊಂಡ ಇಬ್ಬರು ರಸ್ತೆ ಮಧ್ಯದಲ್ಲಿ ನರಳಾಡುತ್ತಿದ್ದರು ಇದನ್ನು ಗಮನಿಸಿದ ಶಾಸಕರು ತಮ್ಮದೇ ಕಾರಿನಲ್ಲಿ ಸಿರಾ ತಾಲೂಕು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿ ಗಾಯಾಳುಗಳಿಗೆ ನೆರವಾಗಿದ್ದಾರೆ.

 

ಸಿರಾ ಶಾಸಕ ರಾಜೇಶ್ ಗೌಡ ರವರ ಮಾನವೀಯತೆಗೆ ಸಿರಾ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!