ಸಮೃದ್ಧ ಕರ್ನಾಟಕಕ್ಕೆ ಬಿಜೆಪಿ ಪಕ್ಷ ಬೆಂಬಲಿಸಿ – ಶಾಸಕ ಜ್ಯೋತಿ ಗಣೇಶ್

ಸಮೃದ್ಧ ಕರ್ನಾಟಕಕ್ಕೆ ಬಿಜೆಪಿ ಪಕ್ಷ ಬೆಂಬಲಿಸಿ – ಶಾಸಕ ಜ್ಯೋತಿ ಗಣೇಶ್.

 

 

ತುಮಕೂರು – ಸಮೃದ್ಧ ಕರ್ನಾಟಕ ಕಟ್ಟಲು ಬಿಜೆಪಿ ಪಕ್ಷವನ್ನು ಬೆಂಬಲಿಸಿ ಎಂದು ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ತಿಳಿಸಿದ್ದಾರೆ.

 

 

 

 

ಮಾರ್ಚ್ 21ರಂದು ತುಮಕೂರು ನಗರದಲ್ಲಿ ಬಿಜೆಪಿ ಪಕ್ಷದಿಂದ ನಡೆಯುವ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮಾರ್ಚ್ 21ರಂದು ತುಮಕೂರು ನಗರದ ಬಿಜಿಎಸ್ ವೃತ್ತದಿಂದ ವಿಜಯ ಸಂಕಲ್ಪ ಯಾತ್ರೆ ನಡೆಸಲಾಗುವುದು ಇನ್ನು ನಗರದಲ್ಲಿ ನಡೆಯುವ ವಿಜಯ ಸಂಕಲ್ಪ ಯಾತ್ರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ,ಕಂದಾಯ ಸಚಿವ ಆರ್ ಅಶೋಕ್, ನಾಯಕರದ ಪಿ.ಸಿ ಮೋಹನ್ ಸೇರಿದಂತೆ ಜಿಲ್ಲೆಯ ಶಾಸಕರು ಪಕ್ಷದ ಮುಖಂಡರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

 

 

 

ಮಾರ್ಚ್ 21ರಂದು ಸಂಜೆ 5 ಗಂಟೆಗೆ ತುಮಕೂರು ನಗರದ ಬಿಜಿಎಸ್ ವೃತ್ತ ದಿಂದ ವಿದ್ಯುತ್ತವಾಗಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಾಗುವುದು ನಂತರ ಯಾತ್ರೆಯು ಎಂ ಜಿ ರಸ್ತೆ ಕೆ.ಆರ್‌.ಎಕ್ಸ್ಟೆನ್ಶನ್ ,ಭದ್ರಮ್ಮ ವೃತ್ತ, ರಾಧಾಕೃಷ್ಣ ರಸ್ತೆ ಎಸ್.ಎಸ್ ಪುರಂ ಮಾರ್ಗವಾಗಿ ತೆರಳಿ ಗಂಗೋತ್ರಿ ನಗರ ಮುಖ್ಯರಸ್ತೆಯಲ್ಲಿ ಮುಕ್ತಾಯಗೊಳ್ಳಲಿದೆ ಇನ್ನು ಕಾರ್ಯಕ್ರಮದಲ್ಲಿ ವಿವಿಧ ಕಲಾತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ವಿಜಯ ಸಂಕಲ್ಪ ಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

 

 

 

 

 

ಇನ್ನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತುಮಕೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಹೆಬ್ಬಾಕ ರವಿ ಮಾತನಾಡಿ ಜಿಲ್ಲೆಯ ಜನರ ಸಹಕಾರದಿಂದ ತುಮಕೂರು ಜಿಲ್ಲೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ಸಂಪೂರ್ಣ ಯಶಸ್ವಿಯಾಗಿ ನಡೆಯುತ್ತಿದ್ದು ಕೊನೆ ದಿನದ ಅಂಗವಾಗಿ ಮಾರ್ಚ್ 21ರಂದು ತುಮಕೂರು ಜಿಲ್ಲೆಯ ತುರುವೇಕೆರೆ, ತುಮಕೂರು ಗ್ರಾಮಾಂತರದ ಬೆಳ್ಳಾವಿ ಹಾಗೂ ತುಮಕೂರು ನಗರದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ ಎಂದರು.

 

 

 

 

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ವೈ.ಎಚ್ ಹುಚ್ಚಯ್ಯ , ಟಿ.ಆರ್ ಸದಾಶಿವಯ್ಯ, ಜಗದೀಶ್ ಹಾಜರಿದ್ದರು.

 

ವರದಿ-ಮಾರುತಿ ಪ್ರಸಾದ್ ತುಮಕೂರು.

Leave a Reply

Your email address will not be published. Required fields are marked *

You cannot copy content of this page

error: Content is protected !!