ಚಿರತೆಯೊಂದಿಗೆ ಸೆಣೆಸಿ ಅಮ್ಮನ ಜೀವ ಉಳಿಸಿದ ಮಗ!

 

 

 

 

 

 

ಚಿರತೆಯೊಂದಿಗೆ ಸೆಣೆಸಿ ಅಮ್ಮನ ಜೀವ ಉಳಿಸಿದ ಮಗ!

ಹಾಸನ: ತಾಯಿಯ ಮೇಲೆರಗಿದ್ದ ಚಿರತೆಯೊಂದಿಗೆ ಹೋರಾಡಿ ಮಗನೊಬ್ಬ ಆಕೆಯ ಪ್ರಾಣ ಕಾಪಾಡಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ನಡೆದಿದೆ._

ಅರಸೀಕೆರೆಯ ಬೈರಗೊಂಡನಹಳ್ಲಿ ಬೋವಿ ಕಾಲೋನಿಯಲ್ಲಿ ಇಂದು ಬೆಳಿಗ್ಗೆ 7.30ರ ಸುಮಾರಿಗೆ ಜಮೀನಿಗೆ ತೆರಳುತ್ತಿದ್ದ ತಾಯಿ-ಮಗನ ಮೇಲೆ ಚಿರತೆ ದಾಳಿ ಮಾಡಿದೆ.

ದಾಳಿಗೊಳಗಾದವರನ್ನು ಚಂದ್ರಮ್ಮ ಹಾಗೂ ಕಿರಣ್ ಎಂದು ಗುರುತಿಸಲಾಗಿದೆ.

ತನ್ನ ತಾಯಿಯ ಮೇಲೆ ಎರಗಿದ ಚಿರತೆಯನ್ನು ಕಂಡ ಕಿರಣ್ ಚಿರತೆಯ ಕುತ್ತಿಗೆ ಬಿಗಿ ಹಿಡಿದು 15 ನಿಮಿಷ ಕಾಲ ಸೆಣೆಸಿದ್ದಾನೆ. ಕಡೆಗೂ ಸೋತ ಚಿರತೆ ಅಲ್ಲಿಂದ ಕಾಲು ಕಿತ್ತಿದೆ.

ಇದೀಗ ಚಿರತೆ ದಾಳಿಯಿಂದ ಗಾಯಗೊಂಡಿರುವ ಕಿರಣ್ ಹಾಗೂ ಚಂದ್ರಮ್ಮನವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ._

ಇನ್ನು ಹಗಲಿನ ವೇಳೆಯೇ ಚಿರತೆ ದಾಳಿ ನಡೆಯುತ್ತಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆದಷ್ಟು ಶೀಘ್ರ ಅರಣ್ಯ ಇಲಾಖೆ ಇತ್ತ ಗಮನಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!