ತುಮಕೂರಿನ ವಿದ್ಯುತ್ತು ಚಿತಾಗಾರಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ ಭೇಟಿ

 

 

ಇಂದು ತುಮಕೂರು ಮಹಾನಗರ ಪಾಲಿಕೆಯ

ವಿದ್ಯುತ್ ಚಿತಾಗಾರಕ್ಕೆ ಸೊಗಡು ಶಿವಣ್ಣ ಜಿ ಹಾಗೂ

ಎನ್.ಎಸ್. ಜಯಕುಮಾರ್ ರವರ ಜೊತೆ

ಭೇಟಿ ನೀಡಿದ ಸಂದರ್ಭ

ಕೊರೋನಾ ವೈರಸ್ ನಿಂದಾಗಿ ತುಮಕೂರು ನಗರದಲ್ಲಿ ಸೋಂಕಿತರ ಸಾವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿತಾಗಾರದ ಕಾರ್ಯಭಾರ ಹೆಚ್ಚಾಗಿದ್ದು ಅವಶ್ಯಕತೆ ಹಾಗೂ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಮೃತದೇಹ ಸುಡುವ ಒಲೆಗಳ ಅವಶ್ಯಕತೆ ಇರುವುದರಿಂದ

ಸ್ಥಳದಿಂದಲೇ ಅವಶ್ಯಕತೆ ಇರುವ ಮೃತದೇಹ ಸುಡುವ ಒಲೆಗಳನ್ನು ಪೂನಾದಿಂದ ಅತ್ಯಂತ ಶೀಘ್ರವಾಗಿ ತರಿಸಲು ಸ್ಥಳದಿಂದಲೇ ಪೂನಾ ಕಂಪೆನಿಯೊಂದಿಗೆ ತುಮಕೂರಿನ ಪ್ರಖ್ಯಾತ ಕೈಗಾರಿಕೋದ್ಯಮಿಗಳಾದ

ಎನ್. ಎಸ್. ಜಯಕುಮಾರ್ ಅವರು ಮಾತನಾಡಿದರು

ಕೊರೋನಾವೈರಸ್ ಹಾವಳಿಯಿಂದ ಮನೆ ಬಿಟ್ಟು ಆಚೆ ಬರಲು ಎದುರಿಸುತ್ತಿರುವ ಹಲವು ರಾಜಕಾರಣಿಗಳ ಮಧ್ಯೆ ಸಮಾಜದ ಸೇವೆಯನ್ನೇ ಸರ್ವಸ್ವವೆಂದು ನಂಬಿ ಇಂತಹ ಗಂಭೀರ ಪರಿಸ್ಥಿತಿಯಲ್ಲೂ ಎದೆಗುಂದದೆ ಸಮಾಜಮುಖಿ ಕೆಲಸ ಮಾಡುತ್ತಿರುವ ಇವರುಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!