ತುಮಕೂರು ಜಿಲ್ಲೆಯ ನಿಕಟ ಪೂರ್ವ ಜಿಲ್ಲಾಧಿಕಾರಿಗಳಾದ ಡಾ”ಕೆ.ರಾಕೇಶ್ ಕುಮಾರ್ ಬೀಳ್ಕೊಡುಗೆ ಸಮಾರಂಭ.

 

 

ತುಮಕೂರು ಜಿಲ್ಲೆಯಲ್ಲಿ ಎರಡುವರೆ ವರ್ಷ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಬೆಂಗಳೂರಿನ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾಗಿ ವರ್ಗಾವಣೆ ಗೊಂಡಿರುವ ತುಮಕೂರು ಜಿಲ್ಲೆಯ ನಿಕಟ ಪೂರ್ವ ಜಿಲ್ಲಾಧಿಕಾರಿಗಳಾದ ಡಾ”ಕೆ.ರಾಕೇಶ್ ಕುಮಾರ್ ಅವರನ್ನು ತುಮಕೂರಿನ ಗೆದ್ದಲಹಳ್ಳಿಯಲ್ಲಿ ಧಮ್ಮಲೋಕ ಬದ್ಧವಿಹಾರ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಅಭಿನಂದಿಸಲಾಯಿತು.

 

 

ಇದೇ ಸಂದರ್ಭದಲ್ಲಿ ಮಾತನಾಡಿದ ರಾಕೇಶ್ ಕುಮಾರ್ ರವರು ತುಮಕೂರು ಜಿಲ್ಲೆಯಲ್ಲಿ ನಾನು ಜಿಲ್ಲಾಧಿಕಾರಿಯಾಗಿ ಉತ್ತಮವಾಗಿ ಕೆಲಸ ನಿರ್ವಹಿಸಿರುವ ತೃಪ್ತಿ ನನಗಿದೆ. ತುಮಕೂರು ಜಿಲ್ಲೆಯ ಎಲ್ಲಾ ಅಧಿಕಾರಿಗಳು ಎಲ್ಲಾ ಸಮುದಾಯದ ನಾಗರಿಕರು ನನಗೆ ಇದುವರೆಗೂ ಸ್ಪಂದಿಸಿದ್ದು ಎಲ್ಲರಿಗೂ ನಾನು ಚಿರಋಣಿಯಾಗಿದ್ದೇನೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನನಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.

ಈ ವೇಳೆಯಲ್ಲಿ ಬೌದ್ದ ಧಮ್ಮಚಾರಿ ಶ್ರೀ ಚಾಂದಿಮಾ ಜೀ,ಬುದ್ಧ ಧಮ್ಮ ಅಧ್ಯಕ್ಷರಾದ ಬಿ.ಪಿ.ಹನುಮಂತರಾಪ್ಪ, ಜಿ.ಪಂ.ಸದಸ್ಯ ಕೆಂಚಮಾರಯ್ಯ,ತುಮಕೂರು ವಿ.ವಿ.ಪರೀಕ್ಷಾಂಗ ವಿಭಾಗದ ಉಪ ಕುಲ ಸಚಿವರಾದ ಡಾ.ರಮೇಶ್ ಸಾಲಿಯಾನ,ಡಾ.ಚಂದ್ರಪ್ಪ,ಗೋವಿಂದರಾಜು,ಆದಿನಾರಾಯಣ್,ರಘುಕುಮಾರ್, ರಂಗದಾಸಪ್ಪ,ಶ್ರೀನಿವಾಸ್, ಎಪಿಪಿ ರಾಜಣ್ಣ,ಸಿ.ಭಾನುಪ್ರಕಾಶ್,ಪತ್ರಕರ್ತ ಹೆಚ್.ಎಸ್.ಪರಮೇಶ್,ರಂಗಯ್ಯ ಸೇರಿದಂತೆ ಅನೇಕ ಗಣ್ಯಮಾನ್ಯರು, ಪ್ರಗತಿಪರ ಚಿಂತಕರು ಉಪಸ್ಥಿತರಿದ್ದರು. ನಮ್ಮ

ತುಮಕೂರು ಛಲವಾದಿ ಪತ್ತಿನ ಸಹಕಾರಿ ನಿ., ಅಧ್ಯಕ್ಷರು ನಿರ್ದೇಶಕರು ಗೌರವಾನ್ವಿತ ರನ್ನು ಅಭಿನಂದಸಲಾಯಿತು.

Leave a Reply

Your email address will not be published. Required fields are marked *

You cannot copy content of this page

error: Content is protected !!